ನಟ ಚೇತನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
1 min readಚಿಕ್ಕಮಗಳೂರು: ನಟ ಚೇತನ್ ಅವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಮುಖಂಡರು ಬುಧವಾರ ನಗರದ ಆಜಾದ್ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜನಪರ ಹೋರಾಟಗಾರ ನಟಚೇತನ್ ಬಂಧನವನ್ನು ವಿವಿಧ ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿದ್ದು, ದಲಿತ, ಧಮನಿತರ ಪರವಾಗಿ ಧ್ವನಿ ಎತ್ತುವ ಜನಪರ ಹೋರಾಟ ಮುಂಚೂಣಿ ನಾಯಕರನ್ನು ಒಂದಿಲ್ಲೊಂದು ನೆಪ ಇಟ್ಟುಕೊಂಡು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನು ಆಳುವ ಸರ್ಕಾರಗಳು ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಚೇತನ್ ಅವರನ್ನು ವ್ಯವಸ್ಥಿತಿ ಸಂಚಿನಿಂದ ಬಂಧಿಸಲಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಜಾತಿ, ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿರುವವರನ್ನು ಬಂಧಿಸದೆ ನ್ಯಾಯಕ್ಕಾಗಿ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಪರವಾಗಿ ಹೋರಾಟ ನಡೆಸುವವರನ್ನು ಬಂಧಿಸಿರುವುದು ಘೋರ ಅನ್ಯಾಯವಾಗಿದೆ ಎಂದಿದ್ದಾರೆ.
ಈ ಬಂಧನವನ್ನು ಗಮನಿಸಿದರೆ ಹೋರಾಟಗಾರರ ಧ್ವನಿ ಅಡಗಿಸುವ ಯತ್ನವಾಗಿದೆ. ಸರ್ಕಾರ ಕೂಡಲೇ ಬೇಷರತ್ತಾಗಿ ನಟ ಚೇತನ್ ಅವರನ್ನು ಬಿಡುಗಡೆಗೊಳಿಸಬೇಕು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನಾನಿರತರನ್ನುದ್ದೇಶಿಸಿ ಮಾತನಾಡಿದ ದಲಿತ, ಪ್ರಗತಿಪರ ಸಂಘಟನೆ ಜಿಲ್ಲಾಧ್ಯಕ್ಷ ದಲಿತಮಕ್ಕಿ ಶ್ರೀನಿವಾಸ ಮಾತನಾಡಿ, ಬಂಧನ ಯಾವ ಕಾರಣಕ್ಕೆ ಎಂದು ನೋಟೀಸ್ ನೀಡದೆ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಸರ್ಕಾರದ ಈ ನಡೆಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.
ವಿವಿಧ ಸಂಘಟನೆ ಮುಖಂಡರಾದ ಗಣೇಶ್, ಕೂದುವಳ್ಳಿ ದೇವರಾಜ್, ಮಂಜುನಾಥ, ಮೋಹನ್ಕುಮಾರ್, ಮರ್ಲೆ ಅಣ್ಣಯ್ಯ, ಉಮೇಶ್ಕುಮಾರ್, ಸುರೇಶ್,ಹುಣಸೆಮಕ್ಕಿ ಲಕ್ಷ್ಮಣ್, ನಂಜುಂಡಪ್ಪ, ಮೀನಾಕ್ಷಿ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g