ಮೂರು ತಿಂಗಳಲ್ಲಿ ಕೊರೊನಾದಿಂದ ದೇಶ ಮುಕ್ತಿ_ವಿನಯ್ ಗುರೂಜಿ
1 min readಚಿಕ್ಕಮಗಳೂರು: ದೇಶದಲ್ಲಿ ಇನ್ನು ಮೂರ್ನಾಲ್ಕು ತಿಂಗಳು ಕೊರೊನಾ ಎಳೆಯಬಹುದು. ಮಾರ್ಚ್ ಅಥವಾ ಮೇಯಲ್ಲಿ ಇಡೀ ದೇಶ ಕೊರೊನಾ ದಿಂದ ಹೊರಬರಬಹುದು ನಾನು ಮೇಡಿಟೇಷನ್ ಮೂಲಕ ತಿಳಿದುಕೊಂಡ ಸತ್ಯ ಹಾಗೂ ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.
ತಾಲೂಕಿನ ದತ್ತಪೀಠದಲ್ಲಿ ಈ ಕುರಿತು ಮಾತನಾಡಿದ ಅವರು, ಮನುಷ್ಯನಿಗೆ ಆತ್ಮಸ್ಥೈರ್ಯ ಬಹುಮುಖ್ಯ ಜನರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ಬೇಡ ಎಲ್ಲವೂ ದೇವರು ನೋಡಿಕೊಳ್ತಾನೆ, ಮ್ಯಾಜಿಕ್ ಆಗಲಿ, ಪವಾಡ ಆಗಲಿ ಅಂದ್ರೆ ಆಗುವುದಿಲ್ಲ ಇದರಿಂದ ಹೊರ ಬರಲು ನಾವು ಪ್ರಯತ್ನಪಡುವುದೇ ನಿಜವಾದ ಪವಾಡ ಎಂದರು. ಇದೇ ವೇಳೆ ಮಾತನಾಡಿದ ಅವರು, ಜನ, ಸರ್ಕಾರ, ಪಕ್ಷಗಳು ಎಲ್ಲರೂ ಒಬ್ಬರನ್ನೊಬ್ಬು ದೂರಿಕೊಳ್ಳುವುದು ಸರಿಯಲ್ಲ ಎಲ್ಲಾ ಜನರನ್ನು ರಕ್ಷಿಸಬೇಕು ಎಂದು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಇನ್ನು ದತ್ತಪೀಠ ವಿಚಾರದದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ ವಿನಯ್ ಗುರೂಜಿ ದತ್ತಪೀಠವನ್ನು ಪ್ರಾಧಿಕಾರ ಮಾಡಿ ಇದನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ಗುರು ಎನ್ನುವುದಕ್ಕಿಂತ ಒಬ್ಬ ಜನಸಾಮಾನ್ಯನಾಗಿ ಸರ್ಕಾರದ ಬಳಿ ದತ್ತಪೀಠದಲ್ಲಿ ಶೌಚಾಲಯಗಳನ್ನು ಮತ್ತಷ್ಟು ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದ ಅವರು ಈ ಕುರಿತು ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು, ನಾನೇ ಸ್ವತ: ಶೌಚಾಲಯಗಳನ್ನು ಕ್ಲೀನ್ ಮಾಡಿ ಬಂದಿದ್ದೇನೆ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕಿದೆ. ವಿಕೆಂಡ್ನಲ್ಲಿ ಈ ಭಾಗಕ್ಕೆ ೨೦೦೦ಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು ಇನ್ನಷ್ಟು ಮೂಲ ಸೌಕರ್ಯಗಳನ್ನು ಒದಗಿಸಬೇಕು ದುಡ್ಡಿದ್ದವರು ರೆಸಾರ್ಟ್ಗೆ ಹೋಗುತ್ತಾರೆ ಆದರೆ ಬಡವರು ಎಲ್ಲಿಗೆ ಹೋಗಬೇಕು ಹಾಗಾಗಿ ಮುಂದಿನ ದಿನಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಇಲ್ಲಿ ಸರ್ಕಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g