ತೋಟ ಕಾರ್ಮಿಕರಲ್ಲಿ ಕೊರೋನ : ಆಂತಕದಲ್ಲಿ ಮಲೆನಾಡು
1 min readಚಿಕ್ಕಮಗಳೂರು : ಹಳ್ಳಿ-ಹಳ್ಳಿಗೂ ವ್ಯಾಪಿಸಿರುವ ಹೆಮ್ಮಾರಿ ಕೊರೋನಾ, ತಳಿಹಾಳ ಗ್ರಾಮ ಪಂಚಾಯಿತಿಯ ಉಳುವಾಗಿಲು ಗ್ರಾಮದ ತೋಟ ಕಾರ್ಮಿಕರಿಗೆ ಕೊರೋನಾ ಪಾಸಿಟಿವ್ ಕಂಡು ಬರುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಹೆಚ್ಚಿಸಿದೆ. ಒಂದೇ ಗ್ರಾಮದ 19 ಕುಟುಂಬದ 28 ಮಂದಿಗೆ ಕೊರೋನ ಲಕ್ಷಣಗಳು ಕಂಡುಬಂದಿದೆ. ಪರೀಕ್ಷೆಯ ನಂತರ 28 ಜನರಿಗೂ ಕೊರೋನ ಪಾಸಿಟಿವ್ ಎಂದು ಗೊತ್ತಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಕಾಂತರಾಜ್ ಹಾಗೂ ಶಾಸಕ ಕುಮಾರ ಸ್ವಾಮಿ ಭೇಟಿ ನೀಡಿದ್ದು, ಗ್ರಾಮದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದ ತಹಶೀಲ್ದಾರ್, ಯಾರೂ ಮನೆಯಿಂದ ಹೊರಬಾರದಂತೆ ಮನವಿ ಮಾಡಿಕೊಂಡಿರುವುದಲ್ಲದೆ, ಆರೋಗ್ಯ ಸಿಬ್ಬಂದಿಗಳಿಗೆ ಪ್ರತಿದಿನ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದಾರೆ. ಗ್ರಾಮದ ಪ್ರತಿ ಕುಟುಂಬಕ್ಕೆ ಒಂದು ತಿಂಗಳ ಆಹಾರದ ಕಿಟ್ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g