April 29, 2024

MALNAD TV

HEART OF COFFEE CITY

ಮೇಕೆದಾಟು ಪಾದಯಾತ್ರೆ: ಹೂವೆತ್ತುವಷ್ಟು ಸುಲಭದ ಕೆಲಸಕ್ಕೆ ಕಾಂಗ್ರೆಸ್ ಕೊಡಲಿ ಹಿಡಿದಿದೆ_ಸಿ.ಟಿ ರವಿ

1 min read

 

ಚಿಕ್ಕಮಗಳೂರು: ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಡಿಎಂಕೆ ಹಾಗೂ ತಮಿಳು ಕಾಂಗ್ರೆಸ್‍ನವರನ್ನು ಮನವೊಲಿಸುವ ಕೆಲಸ ಮಾಡಿದ್ರೆ ಪಾದಯಾತ್ರೆ ಮಾಡುವುದು, ಕೊರೊನಾ ನಿಯಮ ಉಲ್ಲಂಘನೆ ಮಾಡುವುದು, ಕೊರೊನಾ ಬರಿಸಿಕೊಳ್ಳುವುದು ಎಲ್ಲವೂ ತಪ್ಪುತ್ತದೆ ಎಂದು ಮೇಕೆದಾಡು ಪಾದಯಾತ್ರೆಯ ಕುರಿತಂತೆ ಶಾಸಕ ಸಿ.ಟಿ ರವಿ ವ್ಯಂಗ್ಯವಾಗಿ ಉತ್ತರಿಸಿದರು.

ಚಿಕ್ಕಮಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ಬಹಳ ಸುಲಭವಾಗಿ ಮಾಡುವ ಕೆಲಸಕ್ಕೆ ಹೆಚ್ಚು ಶ್ರಮ ತೆಗೆದುಕೊಳ್ಳಲಾಗುತ್ತಿದೆ. ಪಾದಯಾತ್ರೆಯ ಬದಲು ತಮಿಳುನಾಡಿನಲ್ಲಿ ಕಾಂಗ್ರೆಸ್ ಪಾಟ್ನರ್ ಡಿಎಂಕೆ ಸರ್ಕಾರದ ಮನವೊಲಿಸುವ ಕೆಲಸವನ್ನು ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಾಡಬಹುದು ಎಂದರು.

ಮೇಕೆದಾಟು ಯೋಜನೆಗೆ ನ್ಯಾಯಾಲಯದಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಒಂದು ಕಾಲದಲ್ಲಿ ಪ್ರಧಾನಿಉ ಅಭ್ಯರ್ಥಿ ಗುರುತಿಸಿಕೊಂಡಿದ್ದ ಪ್ರಭಾವಿ ರಾಜಕಾರಣಿ ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಎಲ್ಲಾ ಚುನಾವಣೆಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಯುಪಿಎ ಪಕ್ಷಗಳಿಗೆ ಸಹಾಯ ಮಾಡಿದ್ದಾರೆ ಇಂತಹ ಪ್ರಭಾವಿಗಳು ತಮಿಳುನಾಡಿನ ಡಿಎಂಕೆ ಸರ್ಕಾರದ ಮನವೊಲಿಸಿದರೆ ಈ ಪಾದಯಾತ್ರೆಯ ಕಷ್ಟವೇ ಇಲ್ಲ ಎಂದು ವ್ಯಂಗ್ಯವಾಗಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.

ಕೇಂದ್ರ ಸರ್ಕಾರ ಈ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದೆ. ಕರ್ನಾಟಕ ಸರ್ಕಾರ ಯೋಜನೆ ಅನುಷ್ಟಾನಕ್ಕೆ ಬದ್ಧತೆ ವ್ಯಕ್ತಪಡಿಸಿ ಡಿಪಿಆರ್ ಸಿದ್ದಪಡಿಸಿದೆ. ನ್ಯಾಯಾಲಯಕ್ಕೆ ಹಾಕಿರುವುದು ತಮಿಳುನಾಡು ಸರ್ಕಾರ ಈ ಹಿನ್ನೆಲೆಯಲ್ಲಿ ಇವರು ಅವರ ಮನವೊಲಿಸಿದ್ರೆ ಹೂವು ಎತ್ತಿದಷ್ಟು ಸುಲಭದಲ್ಲಿ ಕೆಲಸವಾಗುತ್ತ ಇಂತಹ ಕೆಲಸಕ್ಕೆ ಕಾಂಗ್ರೆಸ್ ಕೊಡಲಿ ತಗೆದುಕೊಂಡು ಮೈ ನೋಯಿಸಿಕೊಳ್ಳು ಹೊರಟಿದೆ ಎಂದು ವ್ಯಂಗ್ಯವಾಡಿದರು.

ಇಬ್ಬರಿಗೂ ತಿಳುವಳಿಕೆ ಇದೆ. ಆದ್ರೂ ಅವರು ಸಂಕಷ್ಟ ಎದುರಿಸುವುದಲ್ಲದೆ ಏಕೆ ಕಾರ್ಯಕರ್ತರನ್ನೆಲ್ಲಾ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಪಾದಯಾತ್ರೆ ಮಾಡಿದರೆ ತಮಿಳುನಾಡು ಸರ್ಕಾರ ಒಪ್ಪಿಕೊಳ್ಳುತ್ತದೆ ಅಂದರೆ ಪಾದಯಾತ್ರೆಯನ್ನು ಚನ್ನೈಗೆ ಮಾಡಬಹುದು ಎಂದು ಕಾಲೆಳೆದರು

ಪಂಚರಾಜ್ಯ ಚುನಾವಣೆ ಘೋಷಣೆಯಾಗಿದ್ದು ನಾಲ್ಕು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಗೋವಾದಲ್ಲಿ ಇಷ್ಟು ದಿನ ಬಿಜೆಪಿ ವರ್ಸಸ್ ಕಾಂಗ್ರೆಸ್ ಅನ್ನುತ್ತಿದ್ದರು ಈಗ ಟಿಎಂಸಿ ಮದ್ಯೆ ಸೇರಿಕೊಂಡಿದ್ದು ಎಎಪಿ ಸಹ ಮೂಗು ತೂರಿಸಿದೆ ಇದರ ನಡುವೆ ಆ ರಾಜ್ಯದ ಜನ ಅಭಿವೃದ್ಧಿ ಹಾಗೂ ಸ್ಥಿರ ಸರ್ಕಾರಕ್ಕೆ ಬಿಜೆಪಿಯನ್ನುಇ ಬೆಂಬಲಿಸುತ್ತಾರೆ. ಉತ್ತರ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಪರವಾದ ಅಲೆ ವ್ಯಕ್ತವಾಗುತ್ತಿದೆ. ಮಣಿಪುರದಲ್ಲಿ ಗೆಲ್ಲುತ್ತೇವೆ ಪಂಜಾಬ್‍ನಲ್ಲಿ ಹಿಂದಿಗಿಂದ ಸ್ವಲ್ಪ ಸುಧಾರಣೆ ಕಂಡು ಬರುತ್ತದೆ. ಕಾಂಗ್ರೆಸ್‍ನಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವುದಿಲ್ಲ ಆದರೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಜ್ಯೋತಿಷಿ ಅಂತಾ ಕರೆದ್ರು ಪರವಾಗಿಲ್ಲ ಕಾಂಗ್ರೆಸ್ ಇರುವ ಒಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!