ಪಾರ್ಕಿಂಗ್’ಗೆ ಟೆಂಡರ್ ವಜಾಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
1 min readಚಿಕ್ಕಮಗಳೂರು: ನಗರಸಭೆ ಪೇ ಪಾರ್ಕಿಂಗ್ ವಿಷಯ ಸುದ್ದಿಯಾಗುತ್ತಿದ್ದಂತೆ ಎಲ್ಲೆಡೆ ವ್ಯಾಪಕ ವಿರೋಧ ಕೇಳಿಬಂದಿದ್ದು, ಕೂಡಲೇ ಟೆಂಡರ್ ವಜಾಗೊಳಿಸಬೇಕೆಂದು ವರ್ತಕರ ಸಂಘ, ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಚಿಕ್ಕಮಗಳೂರು ನಗರಸಭೆಯಿಂದ ಮತ್ತೆ ಎಂ.ಜಿ ರಸ್ತೆ ಪಾರ್ಕಿಂಗ್ ಗೆ ಇದೇ ಜನವರಿ 19ಕ್ಕೆ ಬಹಿರಂಗ ಹರಾಜು ಕರೆದಿದ್ದು, ಈ ಕುರಿತು ಮಲ್ನಾಡ್ ಟಿವಿ ವರದಿ ಮಾಡಿತ್ತು, ಈ ಬೆನ್ನಲ್ಲೇ ಇದನ್ನು ತಡೆಹಿಡಿಯಬೇಕು ಎಂದು ನಗರದ ಪ್ರವಾಸಿ ಮಂದಿರದಲ್ಲಿ ವರ್ತಕ ಸಂಘವು ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ರವರಿಗೆ ಮನವಿ ಸಲ್ಲಿಸಿದರು. ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳಬೇಕೆಂದು ಮಾಡಿರುವ ನಿರ್ಧಾರವನ್ನ ವಜಾ ಮಾಡಬೇಕೆಂದು ಮನವಿ ಸಲ್ಲಿಸಿದ ವರ್ತಕರು ಎಂ.ಜಿ ರಸ್ತೆಯಲ್ಲಿರುವ ಅಂಗಡಿಗಳಿಗೆ ವ್ಯಾಪಾರವೇ ಕಡಿಮೆಯಾಗಿದೆ. ವ್ಯಾಪಾರಸ್ಥರಿಗೆ ಈ ರೀತಿಯ ಬಾಡಿಗೆ ತೆಗೆದುಕೊಂಡರೆ ತುಂಬಾ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೆ ನಗರಸಭೆಯ ಎಲ್ಲಾ ತೆರಿಗೆಗಳು ಜಾಸ್ತಿಯಾಗಿದ್ದು, ಕಸ ವಿಲೇವಾರಿ ಶುಲ್ಕ ಕೂಡ ಹೆಚ್ಚಾಗಿದೆ ಇದನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು. ನಗರಸಭೆಯ ಯಾವುದೇ ತೆರಿಗೆಗಳನ್ನು ಕಟ್ಟದಿದ್ದರೆ, ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಟ್ರೇಡ್ ಲೈಸೆನ್ಸ್ ಅನ್ನು ಕೂಡ ಬಾಯಿಗೆ ಬಂದ ಹಾಗೆ ಕಟ್ಟಿಸಿಕೊಳ್ಳುತ್ತಿದ್ದಾರೆ ವ್ಯಾಪಾರವೇ ಮಂದಗತಿಯಲ್ಲಿದ್ದು, ನಾವೆಲ್ಲರೂ ತೊಂದರೆ ಅನುಭವಿಸುವಂತಾಗಿದೆ. ಮೊದಲು ಪಾರ್ಕಿಂಗ್ ಗೆ ಜಾಗ ಕೊಡಿ ನಂತರ ತೆರಿಗೆ ವಸೂಲಿ ಮಾಡಿ, ಕಂದಾಯ ತೆರಿಗೆಗಳನ್ನು ಜಾಸ್ತಿ ಮಾಡಿದರೆ ನಾವು ಕಟ್ಟುವುದಿಲ್ಲ. ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಈ ಕುರಿತಾಗಿ ಶಾಶ್ವತ ಪರಿಹಾರವನ್ನು ನೀಡಬೇಕು ಎಂದು ವರ್ತಕರು ಒತ್ತಾಯಿಸಿದರು. ಕೂಡಲೇ ಈ ಟೆಂಡರ್ ವಜಾಗೊಳಿಸಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g