“ಸಿಎಂ ಕುರ್ಚಿ ಮಾರಾಟಕ್ಕಿದೆ” ಬಿಜೆಪಿ ಯುವ ಮೋರ್ಚಾದಿಂದ ವ್ಯಂಗ್ಯ ಪ್ರತಿಭಟನೆ
1 min readಚಿಕ್ಕಮಗಳೂರು: ರಾಜ್ಯ ಸರ್ಕಾರದ ಸಿಎಂ ಕುರ್ಚಿ ಗುದ್ದಾಟ ಹಿನ್ನಲೆ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮ್ಯೂಸಿಕಲ್ ಚೇರ್ ಆಟ ಆಡುವ ರೀತಿ ವ್ಯಂಗ್ಯ ಪ್ರತಿಭಟನೆ ಮಾಡಿದ್ದಾರೆ. ಹೌದು ಸದ್ಯ ರಾಜ್ಯ ಸರ್ಕಾರದಲ್ಲಿ ಸಿಎಂ ಕುರ್ಚಿ ಸಂಬಂಧ ಹಲವಾರು ಸುದ್ದಿಗಳು ಸದ್ದು ಮಾಡುತ್ತಿದ್ದು, ಇಂದು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಸಿಎಂ ಕುರ್ಚಿ ವಿರುದ್ಧ ವ್ಯಂಗ್ಯ ಪ್ರತಿಭಟನೆ ಮಾಡಲಾಯಿತು.
ಸಿಎಂ ಕುರ್ಚಿ ಖಾಲಿ, ಮಾರಾಟಕ್ಕಿದೆ ಎಂದು ಬೋರ್ಡ್ ಹಾಕಿ ಮ್ಯೂಸಿಕಲ್ ಚೇರ್ ಆಟ ಆಡುವ ರೀತಿ ವ್ಯಂಗ್ಯ ಮಾಡಿದ್ದಾರೆ. ಸಿದ್ದು, ಡಿಕೆಶಿ, ಖರ್ಗೆ, ಸತೀಶ್ ಜಾರಕಿ ಹೊಳಿ ಭಾವಚಿತ್ರಗಳನ್ನು ಹಿಡಿದು ಮ್ಯೂಸಿಕಲ್ ಚೇರ್ ಆಟ ಆಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದೂ, ಮ್ಯೂಸಿಕಲ್ ಚೇರ್ ನಲ್ಲಿ ಒಬ್ಬರು ಕೂತಾಗ ಉಳಿದ ಮೂವರು ಚೇರ್ ಎಳೆಯುವಂತೆ ವ್ಯಂಗ್ಯಮಾಡಿ ಪ್ರತಿಭಟನೆ ಮಾಡಲಾಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g