May 20, 2024

MALNAD TV

HEART OF COFFEE CITY

ನಿಜ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಕ್ಕೆ ಉರಿಯುತ್ತೆ : ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್

1 min read

 

ಚಿಕ್ಕಮಗಳೂರು. ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿದು ಹೋಗುತ್ತೆ. ಬಿಜೆಪಿಯ ಬೆದರಿಕೆಗೆ ನಾವು ಬೆದರುವ ವಂಶಸ್ಥರಲ್ಲ. ಕಾಂಗ್ರೆಸ್ ವಂಶಸ್ಥರು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, 2020ರಲ್ಲಿ ನಾನು ಸಿ.ಟಿ.ರವಿ ಎಲ್ಲೆಲ್ಲಿ, ಯಾರ್ಯಾರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದೆ. ಸತ್ಯಹರಿಶ್ಚಂದ್ರನ ರೀತಿ ಮಾತನಾಡುವ ನಿಮ್ಮ ಹಿನ್ನೆಲೆ ಏನೆಂದು ಕೇಳಿದ್ದೆ. ಬಿಜೆಪಿ ಸರ್ಕಾರ ರಾಜ್ಯವನ್ನ ಲೂಟಿ ಮಾಡಿದ್ದರೆ, ಸಿ.ಟಿ.ರವಿ ಚಿಕ್ಕಮಗಳೂರನ್ನ ಲೂಟಿ ಮಾಡಿದ್ದರು. ಜನ ನಿಮ್ಮನ್ನ ಲೂಟಿ ರವಿ ಎಂದು ಕರೆಯುತ್ತಿದ್ದಾರೆ ಎಂದಿದ್ದೆ. ಅದಕ್ಕೆ ಅವರು ನನ್ನ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕಿದ್ದರು. ಇಂದು ನನಗೆ ಚಿಕ್ಕಮಗಳೂರು ಕೋರ್ಟ್‍ನಲ್ಲಿ ಬೇಲ್ ಸಿಕ್ಕಿದೆ. ಸಿ.ಟಿ.ರವಿಯವರೇ ನೀವು, ಬ್ಯುಸಿನೆಸ್‍ಮ್ಯಾನ, ಎಜುಕೇಶನಲಿಸ್ಟಾ, ಇಂಡಸ್ಟ್ರೀಯಲಿಸ್ತಾ, ರಿಯಲ್ ಎಸ್ಟೇಟ್ ಮಾಡ್ತೀರಾ ಅಥವ ನಿಮ್ಮ ತಂದೆ ನಿಮಗೆ ದೊಡ್ಡ ಮಟ್ಟದ ಆಸ್ತಿ ಮಾಡಿಕೊಟ್ಟು ಹೋಗಿದ್ದಾರಾ ಏನೆಂದು ತಿಳಿಸಿ ಎಂದು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದೆ. ಅದಕ್ಕೆ ಮಾನನಷ್ಟದ ಕೇಸ್ ಹಾಕಿದ್ದರು. ಅವರಷ್ಟೆ ಅಲ್ಲ, ಬಿಜೆಪಿಯ ಇತರೆ ನಾಯಕರು ಬೆಂಗಳೂರು, ಮೈಸೂರಿನಲ್ಲಿ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಆದರೆ, ನಾವು ಬಿಜೆಪಿಯ ಬೆದರಿಕೆಗೆ ಬೆದರುವ ವಂಶದವರಲ್ಲ. ಕಾಂಗ್ರೆಸ್ ವಂಶಸ್ಥರು ಎಂದಿದ್ದಾರೆ. ನನ್ನ ಆರೋಪದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರಕ್ಕೂ ಮನವಿ ಮಾಡಿ, ನ್ಯಾಯದೀಶರ ಮೂಲಕ ನನ್ನ ಆರೋಪದ ಕುರಿತು ತನಿಖೆ ಮಾಡಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು. ನನ್ನ ಆರೋಪದ ಬಗ್ಗೆ ಸಿಐಡಿಯಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!