May 5, 2024

MALNAD TV

HEART OF COFFEE CITY

ಪ್ರವಾಸಿ ಮಂದಿರಕ್ಕೆ ಆರೋಪಿ ಗಗನನನ್ನು ಕರೆತಂದ ಸಿಸಿಬಿ ಪೊಲೀಸರು

1 min read

 

ಚಿಕ್ಕಮಗಳೂರು : ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಸಂಬಂಧ ಚಿಕ್ಕಮಗಳೂರಿನ ಪ್ರವಾಸಿ ಮಂದಿರಕ್ಕೆ ಆರೋಪಿ ಗಗನನನ್ನು ಕರೆತಂದ ಸಿಸಿಬಿ ಪೊಲೀಸರು ಕರೆತಂದಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ನಡೆಸಿದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.ದೂರುದಾರ ಗೋವಿಂದ ಬಾಬು ಪೂಜಾರಿಯನ್ನ ಸ್ಥಳ ಮಹಜಾರಿಗೆ ಸಿಸಿಬಿ ಪೊಲೀಸರು ಚಿಕ್ಕಮಗಳೂರಿಗೆ ಕರೆತಂದಿದ್ದಾರೆ‌. ಚೈತ್ರಾ ಗ್ಯಾಂಗ್ ಪ್ರವಾಸಿ ಮಂದಿರಲ್ಲಿ ವಿಶ್ವನಾಥ್ ಜಿ ಬೇಟಿ ಮಾಡಿಸಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದೇ ವೇಳೆ ಪ್ರವಾಸಿ ಮಂದಿರದ ಸಿಬ್ಬಂದಿಗಳನ್ನ ವಿಚಾರಣೆ ಮಾಡಿದ್ದಾರೆ, ಇಬ್ಬರು ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿ ರೂಂ ಪಡೆದಿರುವ ಬಗ್ಗೆ, ರೂಂ ಪಡೆಯಲು ಯಾರು ಪೋನ್ ಮಾಡಿದ್ದರು‌ ಎಂದು ಸಿಬ್ಬಂದಿ ಬಳಿ ಮಾಹಿತಿ ಕಲೆಹಾಕಿದ್ದಾರೆ. ಪ್ರೆಶ್ ಅಪ್ ಗೆ ಬಂದಿರಬಹುದು ಎಂದು ಸಿಸಿಬಿ ಪೊಲೀಸ್ರಿಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಯಾವುದೇ ಅಧಿಕೃತವಾಗಿ ಐಬಿ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಲ್ಲ. ಚಿಕ್ಕಮಗಳೂರು ಮುಗಿಸಿ ಕಡೂರಿಗೆ ಸಿಸಿಬಿ ಪೊಲೀಸರು ತೆರಳಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!