May 5, 2024

MALNAD TV

HEART OF COFFEE CITY

ಬಿಜೆಪಿ 15 ವರ್ಷದಲ್ಲಿ ನಗರಸಭೆಯಲ್ಲಿ ಕೆಟ್ಟ ಆಡಳಿತ ನೀಡಿದೆ – ಶಿವನಂದಸ್ವಾಮಿ

1 min read

ಕಳೆದ 15 ವರ್ಷ ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜನವಿರೋಧಿ ಆಡಳಿತ ನಡೆಸಿದೆ, ಬರೀ ಸುಳ್ಳು ಭರವಸೆ ನೀಡಿ ನಗರ ವ್ಯವಸ್ಥೆ ಯನ್ನ ಹಾಳು ಮಾಡಿದ್ದಾರೆ, ಹತ್ತಾರು ಅವಘಡವನ್ನ ಬಿಜೆಪಿ ಸದಸ್ಯರು ಹಾಗೂ ಶಾಸಕರು ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಿವಾನಂದಸ್ವಾಮಿ ಆರೋಪ ಮಾಡಿದ್ದಾರೆ.

ಪ್ರಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ನಗರಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿಬೇಕು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ನಗರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಬಿಜೆಪಿ ಮಾಡಿರುವ ಹಗರಣಗಳನ್ನ ಕಾಂಗ್ರೆಸ್ ಬಯಲಿ ತರುತ್ತದೆ ಎಂದರು. ಇನ್ನು ಅಮೃತ್ ಯೋಜನೆ ಯಲ್ಲಿ ಮೂರು ವರ್ಷಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು, ಆದ್ರೆ ಐದಾರು ವರ್ಷ ಕಳೆದ್ರು ಕೂಡ ಕಾಮಗಾರಿ ಪೂರ್ಣ ಗೊಂಡಿಲ್ಲ, ಯುಜಿಡಿ ಕಾಮಗಾರಿಯೂ ನಗರದಲ್ಲಿ ಪೂರ್ಣಗೊಂಡಿಲ್ಲ ಎಂದು ಬಿಜೆಪಿ ಆಡಳಿತ ವಿರುದ್ಧ ಶಿವನಂದಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು. ಇದೀಗ ನಗರಸಭೆ ಚುನಾವಣೆ ಬಂದಿದೆ, ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಉತ್ತಮ ಆಡಳಿತ ನೀಡುತ್ತೆ ಎಂದರು..

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!