May 18, 2024

MALNAD TV

HEART OF COFFEE CITY

ಮತಾಂತರ ಮತಗಳಿಕೆ ಸಾಧನ ಅಲ್ಲ_ಸಿ.ಟಿ ರವಿ

1 min read

ಚಿಕ್ಕಮಗಳೂರು: ಮತಾಂತರ ಮತಗಳ ಗಳಿಕೆ ಸಾಧನವಲ್ಲ, ಅದು ದೇಶಾಂತರಕ್ಕೆ ಸ ಮಾನ ಎಂದು ಗಾಂಧೀಜಿ ಹೇಳಿದ್ದರೂ. ಇತಿಹಾಸವನ್ನು ಕಾಂಗ್ರೆಸ್ಸಿಗರು ಹಾಗೂ ಸಿದ್ಧರಾ ಮಯ್ಯರವರು ಮತ್ತೋಮ್ಮೆ ಓದಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.ಮತಾಂತರ ಕಾಯ್ದೆ ಸಂಬoಧ ಸಿದ್ಧರಾಮಯ್ಯ ಅವರ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆ ಮೂಲ ಸಂಸ್ಕೃತಿಯನ್ನು ಬದಲಾಯಿಸುವುದಿಲ್ಲ ಎಂದರು.

ಕಾಯ್ದೆಯಲ್ಲಿ ಭೌದ್ಧ, ಜೈನ, ಸಿಖ್ ಧರ್ಮಗಳಿಗೆ ನಿಬಂಧನೆ ಹಾಕಿಲ್ಲ, ಈ ಧರ್ಮಗಳು ಸಂಸ್ಕೃತಿ ಮತ್ತು ಮೂಲನಂಬಿಕೆಯನ್ನು ಬದಲಾಯಿಸುವುದಿಲ್ಲ, ಯಾರು ಬೇಕಾದರೂ ಯಾವ ಧರ್ಮವನ್ನು ಸ್ವೀಕಾರ ಮಾಡಬಹುದು. ಕಾಯ್ದೆಯಲ್ಲಿ ಅವಕಾಶವಿದೆ ಎಂದು ತಿಳಿಸಿದರು.ಹಿಂದೂಗಳು ಮುಸ್ಲೀಂ ಧರ್ಮಕ್ಕೆ ಪರಿವರ್ತನೆಯಾದರೆ ಡಾ|ಬಿ.ಆರ್.ಅಂಬೇಡ್ಕರ್ ಅವ ರಿಗೆ ಎಲ್ಲಿ ಜಾಗ ಸಿಗುತ್ತೇ ಎಂದು ಪ್ರಶ್ನಿಸಿದ ಅವರು, ಹಿಂದೂಗಳು ಭೌದ್ಧರಾದರೇ, ವೈಷ್ಣವರಾದರೇ ಅಂಬೇಡ್ಕರ್‌ಗೆ ಜಾಗಸಿಗುತ್ತೇ, ರಾಮನಿಗೂ ಜಾಗಸಿಗುತ್ತೇ, ಜೈನರ ಮನೆಯಲ್ಲಿ ರಾಮನಿಗೂ ಜಾಗಇದೆ. ಗಣಪತಿಗೂ ಜಾಗಇದೆ. ಇಸ್ಲಾಂಮಿಗೆ ಪರಿವರ್ತ ನೆಯಾದರೇ ಅಂಬೇಡ್ಕರ್‌ಗೂ ಜಾಗ ಇಲ್ಲ, ಬುದ್ಧಗಿನಿಗೂ ಜಾಗಇಲ್ಲ ಎಂದರು.

ಮತಾoತರ ದೇಶಾಂತರಕ್ಕೆ ಸಮ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ನಮ್ಮದೂ ಗೂಡ್ಸೆ ಹಿಂದೂತ್ವ ಅಲ್ಲ, ಗಾಂಧೀ ಹಿಂದೂತ್ವ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಗಾಂಧೀಜಿ ಏನು ಹೇಳಿದ್ದಾರೆ ಎಂದು ಇತಿಹಾ ಓದಲಿ, ಸಿದ್ಧರಾಮಯ್ಯ ಅವರು ಒಮ್ಮೆ ಇತಿಹಾಸ ಓದಿ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!