May 2, 2024

MALNAD TV

HEART OF COFFEE CITY

ಬಗರ್ ಹುಕ್ಕುಂ ಸಕ್ರಮೀಕರಣ ಸಮಿತಿ ಸಭೆ ಕರೆಯಲು ಒತ್ತಾಯ

1 min read

ತಾಲೂಕು ಬಗರ್ ಹುಕ್ಕುಂ ಸಕ್ರಮೀಕರಣ ಸಮಿತಿ ರಚನೆ ಮಾಡಿದ ನಂತರ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಸಭೆ ನಡೆಸದೆ ಇರುವುದರಿಂದ ರೈತರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸಮಿತಿಯ ಸಭೆ ಕರೆದು ಅರ್ಜಿ ವಿಲೇವಾರಿ ಮಾಡಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಿಲ್ಲಾ ಸಂಚಾಲಕ ಸಂತೋಷ್ ಕೆ.ಜಿ ಆಗ್ರಹಿಸಿದರು. ಅವರು ಸುದ್ದಿಗೋಷ್ಠೀಯಲ್ಲಿ ಮಾತನಾಡುತ್ತ ತಾಲೂಕು ಬಗರ್ ಹುಕ್ಕುಂ ಸಕ್ರಮೀಕರಣ ಸಮಿತಿಯು ರಚನೆಯಾದ ನಂತರ ಯಾವುದೇ ಸಭೆಗಳನ್ನು ನಡೆಸುತ್ತಿಲ್ಲ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿ ಸೂಕ್ತ ಆದೇಶವನ್ನು ನೀಡಿದ್ದಾರೆ. ಆದರೆ ಅಧಿಕಾರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಸಮಿತಿ ಸಭೆಯನ್ನು ಕರೆಯುತ್ತಿದ್ದು ಇದರಿಂದ ರೈತರು ಹಕ್ಕು ಪತ್ರ ಪಡೆಯಲು ತೊಂದರೆಯಾಗುತ್ತಿದೆ. ಅಲ್ಲದೆ ಅರಣ್ಯ ಮತ್ತು ಗೋಮಾಳ ಸಮಸ್ಯೆ ಜೀವಂತವಾಗಿದ್ದು, ಕಂದಾಯ ಅಧಿಕಾರಿಗಳ ಹಾಗೂ ಅಣ್ಯ ಅಧಿಕಾರಗಳ ಹಗ್ಗಜಗ್ಗಾಟದಿಂದ ಸಾಮಾನ್ಯ ರೈತನಿಗೆ ತೊಮದರೆಯಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆಯಂತೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!