ಸಭೆ ಅಂತ್ಯದಲ್ಲಿ ನಂಬರ್ ಗಲಾಟೆ ನಗರಸಭೆ ಅಧ್ಯಕ್ಷರ ವಿರುದ್ಧ ಘೋಷಣೆ
1 min readಚಿಕ್ಕಮಗಳೂರು: ನಗರಸಭೆ ಸಾಮಾನ್ಯ ಸಭೆಯ ಕೊನೆಯಲ್ಲಿ ಲೆಕ್ಕಪತ್ರಕ್ಕೆ ಅನುಮೋದನೆ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್ ನಡುವೆ ನಂಬರ್ ಗೇಮ್ ನಲ್ಲಿ ಕೋಲಾಹಲವೇ ನಡೆಯಿತು.
ಚಿಕ್ಕಮಗಳೂರು ನಗರಸಭೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯ ಅಂತ್ಯದ ವೇಳೆಗೆ ಲೆಕ್ಕಪತ್ರ ಅನುಮೋದನೆ ವಿಚಾರವಾಗಿ ನಿರೀಕ್ಷೆಯಂತೆ ಕೋಲಾಹಲವೆ ನಡೆಯಿತು. ಅನುಮೋದನೆಗೆ ಬಹುಮತ ಇಲ್ಲ ಎಂದು ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಿಗೆ ತಮ್ಮ ಬೆಂಬಲ ಸೂಚಿಸಿದರು. ಪರ ವಿರೋಧ ಎರಡೂ ಕಡೆ 17 ಸದಸ್ಯರು ಇದ್ದಾರೆ ಎಂದ ಅಧ್ಯಕ್ಷ ವೇಣುಗೋಪಾಲ ಕಾಸ್ಟಿಂಗ್ ವೋಟ್ ಚಲಾಯಿಸುವ ಮೂಲಕ ತಮ್ಮ ಬಹುಮತ ದೊರೆತಿದೆ ಎಂದು ಸಭೆಯಿಂದ ಹೊರಟು ಹೋದರು ಅವರ ಹಿಂದೆ ಶಾಸಕ ತಮ್ಮಯ್ಯ ಹಾಗೂ ಎಲ್ಲಾ ಕಾಂಗ್ರೆಸ್ ಸದಸ್ಯರು ಹೊರನಡೆದರು. ಆದರೆ ಹಾಜರಾತಿ ಪುಸ್ತಕ ತೋರಿಸಿ ಅಧ್ಯಕ್ಷರ ಪರ ಕೇವಲ 16 ಮತಗಳಿದ್ದು ನಗರಸಭೆ ಲೂಟಿ ಹೊಡೆಯಲು ಬಹುಮತ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆಂದು ಸಭಾಂಗಣದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g