ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದ ಅಧಿಕಾರಿ
1 min readಚಿಕ್ಕಮಗಳೂರು: 35 ವರ್ಷಗಳಿಂದ ಬಗೆಹರಿಯದ ಸಮಸ್ಯೆಯನ್ನು ವಾರದೊಳಗೆ ಬಗೆಹರಿ ಸುವ ಮೂಲಕ ಹಿರಿಯ ಉಪವಿಭಾಗಾಧಿಕಾರಿ ಡಾ|ಎಚ್.ಎಲ್.ನಾಗರಾಜ್ ಅವರು ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಇತ್ತೀಚೆಗೆ ತಾಲ್ಲೂಕಿನ ಸಿರವಾಸೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸುತ್ತಮುತ್ತಲ ಗ್ರಾಮದ ಅನೇಕರು ಆಗಮಿಸಿದ್ದರು. 94ಸಿ ಅಡಿಯಲ್ಲಿ 150ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಬಹುತೇಕ ಅರ್ಜಿಗಳಿಗೆ ಪರಿಹಾರ ಕಲ್ಪಿಸಿಕೊಟ್ಟರು.
ಸಿರವಾಸೆ ಗ್ರಾಮದ 6 ಕುಟುಂಬಗಳು ವ್ಯಕ್ತಿಯೊಬ್ಬರಿಂದ 1987ರಲ್ಲಿ ಕಂದಾಯ ಭೂಮಿ ಖರೀದಿಸಿದ್ದರು. ಆಗ ಜಮೀನುದಾರರು ಗ್ರಾಮ ಪಂಚಾಯತ್ ಅಸೆಸ್ಮೆಂಟ್ ದಾಖಲಿಸಿ ನೋದಣಿ ಮಾಡಿಸಿಕೊಟ್ಟಿದ್ದರು. ಜಮೀನು ಖರೀದಿಸಿದವರ ಸ್ವಾಧೀನದಲ್ಲಿ ಜಮೀನಿದ್ದರೂ ಅವರ ಹೆಸರಿಗೆ ಇಲ್ಲಿಯವರೆಗೂ ಖಾತೆಯಾಗಿರಲಿಲ್ಲ.
ಈ ಕುಟುಂಬಗಳು ಕಳೆದ 35ವರ್ಷಗಳಿಂದ ಜಮೀನು ಖಾತೆ ಮಾಡಿಸಿಕೊಳ್ಳಲು ಕಡತಗಳ ನ್ನು ಹಿಡಿದು ಸರ್ಕಾರಿ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದರು. ಅನೇಕ ಬಾರೀ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಈ ಕುಟುಂಬಗಳು ತಾವು ಎದುರಿಸುತ್ತಿ ರುವ ಸಮಸ್ಯೆಯನ್ನು ಹಿರಿಯ ಉಪವಿಭಾಗಾಧಿಕಾರಿ ಡಾ|ಎಚ್.ಎಲ್.ನಾಗರಾಜ್ ಅವರ ಗಮನಕ್ಕೆ ತಂದಿದ್ದರು.
ಡಾ|ಎಚ್.ಎಲ್.ನಾಗರಾಜ್ ಅವರ 6 ಕುಟುಂಬಗಳ ಸಮಸ್ಯೆಯನ್ನು ಪರಿಶೀಲಿಸಿ ವಾರದೊ ಳಗೆ ಆ ಕುಟುಂಬಗಳ ಹೆಸರಿಗೆ ಜಮೀನು ಖಾತೆ ಮಾಡಿಸಿಕೊಟ್ಟಿದ್ದಾರೆ. ಇದರಿಂದ ಸಂ ತೋಷಗೊಂಡ ಕುಟುಂಬಸ್ಥರು ಮತ್ತು ಗ್ರಾಮದವರು ಉಪವಿಭಾಗಾಧಿಕಾರಿಗಳಿಗೆ ಪ್ರೀತಿ ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
‘ಉಪವಿಭಾಗಾಧಿಕಾರಿಗಳು ಒಳ್ಳೆಯ ಅಧಿಕಾರಿ ಅಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇರ ಬೇಕು. ಸಿರವಾಸೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆಹಳ್ಳಿಕಡೆ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳ ಬಹುತೇಕ ಸಮಸ್ಯೆಯನ್ನು ಬಗೆಹರಿಸಿದ್ದಾರೆ.’
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g