ಆಮ್ ಆದ್ಮಿ ಪಕ್ಷದ ಮುಖಂಡ ದೀಪಕ್ ಮಾಡಿರೋ ಆರೋಪದಲ್ಲಿ ಹುರುಳಿಲ್ಲ- ಸುಧೀರ್
1 min readಚಿಕ್ಕಮಗಳೂರು: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಶಾಸಕ ಸಿ.ಟಿ.ರವಿ ೧೫ ಲಕ್ಷ ರೂ. ನೀಡಿದ್ದಾರೆಂಬ ಆಮ್ಆದ್ಮಿ ಪಕ್ಷದ ಮುಖಂಡರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಆರೋಪ ಮಾಡಿದವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಾಜಿ ನಗರಸಭಾ ಸದಸ್ಯ ಸುಧೀರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ವಾರ್ಡ್ ೨೭ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ನರಸಿಂಹಮೂರ್ತಿ ಅವರು ಸೋಲು ಕಂಡಿ ದ್ದಾರೆ. ಇದೇ ವಾರ್ಡ್ನಿಂದ ಆಮ್ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ದೀಪಕ್ ಹಾಗೂ ಬಿಜೆಪಿ ಅಭ್ಯರ್ಥಿ ನರಸಿಂಹಮೂರ್ತಿ ಸ್ನೇಹಿತರಾಗಿದ್ದಾರೆ ಎಂದರು.
ಚುನಾವಣೆ ಬಳಿಕ ದೀಪಕ್ ಅವರು ನರಸಿಂಹ ಅವರಿಗೆ ದೂರವಾಣಿ ಕರೆ ಮಾಡಿದ್ದು, ಬೇರೆ ಪಕ್ಷಗಳ ಅಭ್ಯರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿ ಗೆದ್ದಿದ್ದಾರೆ ಎಂದು ದೀಪಕ್ ಹೇಳಿ ದ್ದರಿಂದ, ಪ್ರತಿಷ್ಠೆಗಾಗಿ ನರಸಿಂಹ ಅವರು, ನಾನು ೧೫ಲಕ್ಷ ಖರ್ಚು ಮಾಡಿದ್ದೇನೆ, ಸಿ.ಟಿ.ರವಿ ಹಣ ನೀಡಿದ್ದರು ಸುಳ್ಳು ಹೇಳಿದ್ದರು. ಆದರೆ ದೀಪಕ್ ಆಡಿಯೋ ರೆಕಾರ್ಡ್ ಮಾಡಿ ಸಾರ್ವ ಜನಿಕವಾಗಿ ಹರಿಬಿಟ್ಟಿದ್ದು, ಬಿಜೆಪಿ ಪಕ್ಷ ಹಾಗೂ ಸಿ.ಟಿ.ರವಿ ವಿರುದ್ಧ ಚುನಾವಣೆಯಲ್ಲಿ ಹಣ ಹಂಚಿ ಗೆದ್ದಿದ್ದಾರೆಂದು ಆರೋಪಿಸಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.
ಆಪ್ ಪಕ್ಷದಿಂದ ಸ್ಪರ್ಧಿಸಿದ್ದ ದೀಪಕ್ ಅವರು ತಮ್ಮ ಸ್ನೇಹಿತನ ಮುಗ್ಧತೆಯನ್ನು ದುರು ಪಯೋಗಪಡಿಸಿಕೊಂಡು ಸಿ.ಟಿ.ರವಿ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇಬ್ಬರು ಸ್ನೇಹಿತರ ನಡುವೆ ನಡೆದ ಖಾಸಗಿ ಸಂಭಾಷಣೆ ಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಮೂಲಕ ಅವರು ಅಪರಾಧ ಮಾಡಿ ದ್ದಾರೆ. ಈ ಸಂಬoಧ ಪಕ್ಷ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಮುಖಂಡ ನರಸಿಂಹಮೂರ್ತಿ ಮಾತನಾಡಿ, ದೀಪಕ್ ಹಾಗೂ ನಾನು ೨೦ ವರ್ಷ ಗಳಿಂದ ಸ್ನೇಹಿತರು. ಅವರು ಬಿಡುಗಡೆ ಮಾಡಿರುವ ಆಡಿಯೋ ನನ್ನದೇ, ಆದರೆ ಸಿ.ಟಿ.ರವಿ ನನಗೆ ಹಣ ನೀಡಿದ್ದಾರೆಂಬುದು ಸುಳ್ಳು. ಮಾತಿನ ಭರದಲ್ಲಿ ಪ್ರತಿಷ್ಠೆಗಾಗಿ ಹಾಗೆ ಹೇಳಿದ್ದೆ. ನಾನು ಮಾತನಾಡಿದ್ದನ್ನು ರೆಕಾರ್ಡ್ ಮಾಡಿ ಬಹಿರಂಗ ಮಾಡುತ್ತಾರೆಂದು ಭಾವಿಸಿರಲಿಲ್ಲ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿ, ನಾಯರ್, ಸುನಿಲ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g