ಎರಡು ದಿನಗಳ ಕಾಲ ನಡೆದ ವಿಜೃಂಭಣೆಯ ಬಸವತತ್ವ ಸಮಾವೇಶ
1 min readಬಸವತತ್ವ ಸಮಾವೇಶ ಹಾಗೂ ಶ್ರೀ ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಡಾ|| ಶ್ರೀ ಬಸವ ಮರುಳ ಸಿದ್ದ ಸ್ವಾಮಿಗಳವರಿಗೆ ಭಕ್ತರಿಂದ ಬಿನ್ನವತ್ತಳೆ ಕಾರ್ಯಕ್ರಮನ್ನು ನಗರದ ಕಲ್ಯಾಣ ನಗರದ ಬಸವ ಮಂದಿರದಲ್ಲಿ ಭಾನುವಾರ ಮತ್ತು ಸೋಮವಾರಗಳ ಎರಡು ದಿನಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಭಾನುವಾರದ ಜ್ಯೋತಿ ಬೆಳಗುವುದರ ಮೂಲಕ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷರು ಹಾಗೂ ಮಾಜಿ ಸಚಿವರಾದ ಈಶ್ವರ ಖಂಡ್ರೆ ಚಾಲನೆ ನೀಡಿದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಿತು. ಸೋಮವಾರದ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಶಾಸಕರು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಾಲನೆ ನೀಡಿದರು. ವೇದಿಕೆಯಲ್ಲಿ ಬಸವತತ್ವ ಸಮಾವೇಶ ಹಾಗೂ ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಡಾ|| ಶ್ರೀ ಬಸವ ಮರುಳ ಸಿದ್ದ ಸ್ವಾಮಿಗಳವರಿಗೆ ಭಕ್ತರಿಂದ ಬಿನ್ನವತ್ತಳೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಕಾರ್ಯಕ್ರಮಕ್ಕೆ ದೂರದೂರಿನಿಂದ ಬಂದ ಶರಣ ಶರಣೆಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g