ಅರಣ್ಯಧಿಕಾರಿಗಳ ಮೇಲೆ ಒಂಟಿ ಸಲಗ ದಾಳಿ.. ತಪ್ಪಿದ ಭಾರೀ ದುರಂತ..!
1 min readಚಿಕ್ಕಮಗಳೂರು: ಆನೆ ಕಾರ್ಯಾಚರಣೆ ವೇಳೆ ಭಾರೀ ದುರಂತವೊಂದು ತಪ್ಪಿದೆ ..ಹೌದು ಆನೆ ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯಧಿಕಾರಿಗಳ ಮೇಲೆ ಆನೆ ಎರಗಿದೆ .. ನಲ್ಲೂರಿನ ಕೆರೆ ಸಮೀಪದ ತೋಟದಲ್ಲಿ ಸುಮಾರು 7 ಆನೆ ಗಳ ಗುಂಪು ಇದ್ದು ಒಂದು ಒಂಟಿ ಸಲಗ ಆ ಗುಂಪಿನ ಜವಾಬ್ದಾರಿ ಹೊತ್ತಿದೆ, ಪಟಾಕಿ ಹಾಗು ಜನಗಳ ಶಬ್ದಕ್ಕೂ ಹೆದರದೆ, ಪಟಾಕಿ ಹೊಡೆದವರತ್ತ ಮುನ್ನುಗಿದೆ, ಅಲ್ಲದೆ ಅರಣ್ಯಧಿಕಾರಿಗಳ ಮೇಲೆ ದಾಳಿ ನಡೆಸಿದೆ.
ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪುರುಷೋತ್ತಮ್ ಎಂಬ ಅರಣ್ಯ ರಕ್ಷಕರಿಗೆ ಓಡುವಾಗ ಕೈಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಲ್ಲೂರು ಹಾಗೂ ಮತ್ತಾವರಕ್ಕೆ ಹೊಂದಿಕೊಂಡಿರುವ ಜನರು ತೋಟಗಳಿಗೆ ಹೋಗದೆ ಇರುವುದು ಉತ್ತಮ. ಸದ್ಯ ಆನೆಗಳು ಶಿರಗುಂದ, ದಂಬದಹಳ್ಳಿ ಭಾಗದಲ್ಲಿವೆ ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳು ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g