ಚಿಕ್ಕಮಗಳೂರಿನಲ್ಲಿ 9 ನೇ ನೂತನ ತಾಲೂಕು ಕೇಂದ್ರಕ್ಕೆ ಅಸ್ತು…!
1 min readಚಿಕ್ಕಮಗಳೂರು : ಮಲೆನಾಡ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾದ ಕಳಸ ತಾಲೂಕಿನ ಘೋಷಣೆಗೆ ರಾಜ್ಯ ಸರ್ಕಾರ ಕೊನೆಗು ಅಸ್ತು ಎಂದಿದೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಳಸ ಹೋಬಳಿಯನ್ನು ತಾಲೂಕು ಘೋಷಣೆ ಮಾಡಬೇಕೆಂದು ಕಳಸ ಹಾಗೂ ಹೊರನಾಡು ಭಾಗದ ಜನರು ಬಹು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರು. ಈ ಭಾಗದ ಜನರ ಬೇಡಿಕೆಯನ್ನು ವರುಷದ ಹಿಂದೆ ಪತ್ರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು, ಕಳಸ ಭಾಗದಿಂದ ಜನರು ಮೂಡಿಗೆರೆ ತಾಲೂಕು ಕೇಂದ್ರಕ್ಕೆ ಬರಲು 58 ಕಿ.ಮೀ ಹಾಗೂ ಬಾಳೆಹೊನ್ನೂರಿನಿಂದ 83 ಕಿ.ಮೀ ದೂರದ ಅಂತರವಿದೆ. ಗ್ರಾಮಾಂತರ ಭಾಗದಿಂದ ಬಂದ ಜನರು ಕೆಲಸ ಮುಗಿಸಿ ತಮ್ಮ ಸ್ವಸ್ಥಾನಕ್ಕೆ ಸಾಗಲು ಒಂದು ದಿನವೇ ಬೇಕಾಗಿತ್ತು.
ಕಳಸ ಭಾಗದ ಜನರ ಬಹು ವರ್ಷಗಳ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೂತನ ಕಳಸ ತಾಲೂಕನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ 9 ನೇ ತಾಲೂಕು ಕೇಂದ್ರವಾಗಿ ಕಳಸ ತಾಲೂಕು ಕೇಂದ್ರ ಉದಯವಾಗಿದೆ. ಈ ಮೂಲಕ ಕಳಸ ಭಾಗದ ಜನರ ಕನಸು ನನಸಾಗಿದೆ. ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ತಾಲೂಕು ಕೇಂದ್ರ ಘೋಷಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಸಂಸದೆ ಶೋಭಾ ಕರಂದ್ಲಾಜೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g