ಕರವೇ ಜಿಲ್ಲಾ ಕಚೇರಿಯಲ್ಲಿ ಡಿ. ದೇವರಾಜ್ ಅರಸ್ ರವರ 106 ನೇ ಜಯಂತ್ಯೋತ್ಸವ
1 min readಚಿಕ್ಕಮಗಳೂರು: ಕರ್ನಾಟಕ ರಕ್ಷಣಾ ವೇಧಿಕೆಯಿಂದ ದಿವಂಗತ ಡಿ.ದೇವರಾಜ್ ಅರಸ್ ರವರ 106ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತ್ತು. ಕರವೇ ಚಿಕ್ಕಮಗಳೂರು ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶ್ರೀ ತೇಗೂರು ಜಗದೀಶ್ ಅರಸ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತ್ತು.
ಕರವೇ ಚಿಕ್ಕಮಗಳೂರು ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಶ್ರೀ ತೇಗೂರು ಜಗದೀಶ್ ಅರಸ್ ರವರ ಅಧ್ಯಕ್ಷತೆಯಲ್ಲಿ ನಾಡು ಕಂಡ ಮಹಾನ್ ನಾಯಕ, ಕರ್ನಾಟಕದ ಪಿತಾಮಹ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ. ಡಿ. ದೇವರಾಜ್ ಅರಸ್ ರವರ 106 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಆಚರಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಶ್ರೀ ತೇಗೂರು ಜಗದೀಶ್ ಅರಸ್ ಕಾರ್ಯಕ್ರಮದಲ್ಲಿ ಮಾತನಾಡಿ. ಧೀಮಾಂತ ನಾಯಕನ ನೆನಪು ಮಾಡುವುದು ಪ್ರತಿಯೊಬ್ಬ ಅಧಿಕಾರಿ, ರಾಜಕಾರಣಿ, ರೈತರು ಹಾಗೂ ಪ್ರತಿಯೊಬ್ಬರ ಕರ್ತವ್ಯ ಮಹಾನ್ ಸಾಧಕನ ಸಾಧನೆಯ ತಿಳಿಯ ಬೇಕು. ಉಳುವವನೆ ಒಲದ ಒಡೆಯ, ದುಡಿಮೆ ಮಾಡುವ ಕಾರ್ಮಿಕನಿಗೂ ಕೂಡು ಜಮೀನು ತಂದುಕೊಟ್ಟ ವ್ಯಕ್ತಿ, ವಿಧ್ಯಾರ್ಥಿಗಳಿಗೆ ಹಾಸ್ಟೇಲ್ ನಿರ್ಮಾಣ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ಕೊಟ್ಟ ಮಹಾನ್ ಚೇತನ ದೇವರಾಜ್ ಅರಸರು. ಅನಿಷ್ಟ ಪದ್ದತಿಯನ್ನ ಹೋಗಲಾಡಿಸಿದವರು, ಸಮಾಜದ ಕಟ್ಟಕಡೆಯ ವ್ಯಕ್ತಿಯು ಈ ಸಮಾಜದಲ್ಲಿ ಜೀವನ ಮಾಡಬಹುದು ಎಂದು ದಾರಿ ತೋರಿಸಿದ ಮಹಾನ್ ಸಾಧಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕೆಂಪನಹಳ್ಳಿ ಅಶೋಶ್, ದಶರಥರಾಜು, ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ನಾಗಲತಾ, ತಾಲ್ಲೂಕು ಕಾರ್ಯದರ್ಶಿ ಇರ್ಷಾದ್ ಅಹಮದ್ ಭಾಗವಹಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g