May 15, 2024

MALNAD TV

HEART OF COFFEE CITY

ಮೌನ ಪ್ರತಿಭಟನೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ವೈ.ಎಸ್.ವಿ ದತ್ತ

1 min read

ಚಿಕ್ಕಮಗಳೂರು : ರಾಗಿಗೆ ಬೆಂಬಲ ಬೆಲೆ ಘೋಷಿಸುವಂತೆ ಹಾಗೂ ಬಂಡಿಮೋಟು ಪ್ರದೇಶ ಸಂರಕ್ಷಣೆ ಮಾಡುವಂತೆ ಮತ್ತು ಬಗರ್ ಹುಕುಂ ಸಾಗುವಳಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಜೆಡಿಎಸ್ ಪಕ್ಷದ ಕಾಯ್ಕರ್ತರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮೌನ ಪ್ರತಿಭಟನೆ ಮಾಡಿದರು.

ನಂತರ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರಗೆ ಮನವಿ ಸಲ್ಲಿಸಿ ಬೇಡಿಕೆ ವಿವರಿಸಿದರು

 

ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ವೈ.ಎಸ್.ವಿ ದತ್ತ, ನಮ್ಮ ಕಡೂರು ತಾಲೂಕಿಗೆ ಸಂಬAಧಪಟ್ಟ ಹಾಗೆ  ಮೂರು ಮುಖ್ಯವಾದ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರರವರ ಗಮನಕ್ಕೆ ತಂದು ತಕ್ಷಣ ಇದಕ್ಕೆ ಪರಿಹಾರ ಒದಗಿಸಿಕೊಡಬೇಕೆಂದು ಕೇಳಿ ನಾವಿಲ್ಲಿ ಅಹಿಂಸಾತ್ಮಕವಾದ ಮೌನ ಪ್ರತಿಟನೆಯನ್ನು ಜಿಲ್ಲಾಧಿಕಾರಗಳ ಕಛೇರಿ ಮುಂದೆ ಮಾಡಿದ್ದೇವು. ನಮ್ಮ ಕಡೂರು ಮತ್ತು ತರೀಕೆರೆ ರೈತರುಗಳು ರಾಗಿಯನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ದುಡ್ಡು ಕೊಡಬೇಕಾದ ಸರ್ಕಾರ ಮಾರ್ಚ್ 6 ನೇ ತಾರೀಖಿನವರೆಗೆ ಮಾತ್ರ ಕೊಟ್ಟಿದೆ. ಮಾರ್ಚ್ 6 ರಿಂದ ಮಾರ್ಚ್ 31 ರವೆಗೆ ಯಾರು ಕೊಟ್ಟಿದ್ದಾರೆ ರೈತರು ಅವರಿಗೆ ಈಗ ನಾಲೈದು ತಿಂಗಳಾದರೂ ಕೂಡ ಹಣ ಬಾಕಿ ಕೊಟ್ಟಿಲ್ಲ. 127 ಕೋಟಿ ರೂಪಾಯಿ ಬರಿ ನಮ್ಮ ಎರಡು ತಾಲೂಕಿಗೆ ಬರಬೇಕು. ರೈತರು ಬೀಜಕ್ಕೆ ದುಡ್ಡು ಇಲ್ಲದೆ, ಗೊಬ್ಬರಕ್ಕೆ ದುಡ್ಡು ಇಲ್ಲದೆ, ಮುಂಗಾರು ಮಳೆ ಆರಂಭವಾಗಿ ಫಜಿತಿಲ್ಲಿದ್ದಾರೆ. ಒಂದು ವಾರದ ಒಳಗಾಗಿ ರಾಗಿ ನೀಡಿರುವ ರೈತರ ಖಾತೆಗೆ ಬಾಕಿ ಹಣ ಜಮವಾಗಬೇಕು. ಸರ್ಕಾರ ಜಮಾ ಮಾಡದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ನಾನು ಮತ್ತು ರೈತರು ಧರಣಿ ಕುಳಿತು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದು, ಸಚಿವರು ಅದಕ್ಕೆ ಅವಕಾಶ ನೀಡದೆ ಆದಷ್ಟು ಬೇಗ ಹಣ ಬಿಡುಗಡೆಗೆÆಳಿಸಲಾಗುವುದು ಎಂದು ಹೇಳಿರುವುದರಿಂದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ಹೇಳಿದರು.

ಅಲ್ಲದೆ 20 ಕೋಟಿ ರೂಪಾಯಿ ಬೆಲೆ ಬಾಳುವ ಪುರಸಭೆಯ ಆಸ್ತಿ ಬಂಡಿ ಮೋಟ್ ಜಾಗವನ್ನು 70 ವರ್ಷಗಳಿಂದ ಸಾರ್ವಜನಿಕರು ಉಪಯೋಗ ಮಾಡಿಕೊಳ್ಳುತ್ತಿದ್ದರು. ಈಗ ಖಾಸಗಿ ವ್ಯಕ್ತಿಯೊಬ್ಬ 70 ವರ್ಷಗಳ ಕಂದಾಯವನ್ನು ಒಟ್ಟಿಗೆ ಕಟ್ಟಿ ಮುಟ್ಟುಗೋಲು ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. 70 ವರ್ಷದ ಕಂದಾಯವನ್ನು ಒಟ್ಟಿಗೆ ಕಟ್ಟಬೇಕಾದರೆ ನಿಮ್ಮ ಕಂದಾಯ ನಿಯಮವಳಿಗಳು ಏನು ಹೇಳುತ್ತವೆ ಎಂದು ಪ್ರಶ್ನಿಸಿದರಲ್ಲದೆ, 70 ವರ್ಷದ ಕಂದಾಯವನ್ನು ಹೇಗೆ ಒಟ್ಟಿಗೆ ಕಟ್ಟಿಸಿಕೊಂಡರು ಎಂದು ಪ್ರಶ್ನಿಸಿದರು. ನಾನು ಬಗರ್ ಹುಕ್ಕುಂ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮಾಡಿದ್ದ ಪಟ್ಟಿಯನ್ನು ಅಧಿಕಾರಿಗಳು ತಿರುಚಿದ್ದಾರೆ. ಸಾಗುವಳಿ ಚೀಟಿ ಪಡೆದ ರೈತರಿಗೆ ಖಾತೆ ಮಾಡಿಕೊಡುತ್ತಿಲ್ಲ. ರೈತರು ಬಗರ್ ಹುಕ್ಕುಂ ಸಾಗುವಳಿ ಚೀಟಿ ತೆಗೆದುಕೊಂಡು ಹೋದರು ಖಾತೆ ಮಾಡಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.  ಬಗರ್ ಹುಕ್ಕುಂ ಸಾಗುವಳಿಯಲ್ಲಿ ನಡೆದಿರುವ ಅಕ್ರಮ ತನಿಖೆಯ ವೇಳೆ ನನ್ನನ್ನು ಕರೆದರೆ ನಾನು ಹೋಗುತ್ತೇನೆ ಎಂದು ಹೇಳಿದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://www.youtube.com/channel/UCmBISI2sn_0gamb44UFj-vQ

 

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

https://drive.google.com/file/d/1NAncco3HJMY9rgMxE4KXBh69G-O67_A_/view?usp=sharing

 

 

 

 

 

Credits:

Music : latest 2020 6 different no copyright news background music, royalty free (black mart)

 

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!