ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಕಾಫಿನಾಡ ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
1 min read
ಚಿಕ್ಕಮಗಳೂರು : ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಅನುಕೂಲವಾಗಲೆಂದು ಶಾಲೆಯಲ್ಲೇ ಮಕ್ಕಳಿಗಾಗಿ ಪಿಗ್ಮಿ ವ್ಯವಸ್ಥೆ. ಕಳೆದ 11 ವರ್ಷಗಳಿಂದ ಶಾಲೆಯಲ್ಲಿ ಮಕ್ಕಳ ಪಿಗ್ಮಿ ಕಲೆಕ್ಟ್ ಮಾಡುತ್ತಿರೋ ತಾಲೂಕಿನ ಆಲ್ದೂರು ಸಮೀಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದೇ ಹಣದಲ್ಲಿ ಪ್ರತಿ ವರ್ಷ ಮಕ್ಕಳನ್ನ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಇನ್ನು ಇದೇ ಶಾಲೆಯಲ್ಲಿ ಇದೇ 2022ರ ಜೂನ್ನಿಂದ ಮಕ್ಕಳ ಬ್ಯಾಂಕ್ ಕೂಡ ಆರಂಭಿಸಿದ್ದಾರೆ. ಮಕ್ಕಳಿಂದ, ಮಕ್ಕಳಿಗಾಗಿಯೇ ಶಾಲಾ ಬ್ಯಾಂಕ್ ಖಾತೆ ತೆರೆಯಲಾಗಿದೆ. 75ನೇ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವ ಹಿನ್ನೆಲೆ ಈ ದಿನ ಮಕ್ಕಳಿಗೆ ಖಾತೆ ಪುಸ್ತಕಗಳನ್ನ ವಿತರಿಸಿದ್ದಾರೆ.
ಇದರ ಜೊತೆ ಮೈಸೂರಿನ ಕುಮಾರ್ ಎಂಬ ದಾನಿಗಳ ನೆರವಿನಿಂದ ಶಾಲಾ ಮಕ್ಕಳಿಗೆ ಸ್ವೆಟರ್, ಟೋಪಿಯನ್ನು ಕೊಡುಗೆಯಾಗಿ ನೀಡಿದ್ದರು. ಶಾಲೆ ವತಿಯಿಂದ ಮಕ್ಕಳಿಗೆ ಯೂನಿಫಾರಂ ಹಾಗೂ ಟೈ-ಬೆಲ್ಟ್ ವಿತರಿಸಿದರು. ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಗೀತಾರವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶಾಲೆಗೆ ಐದು ಫೈಬರ್ ಚೇರ್ ಹಾಗು ಗೋದ್ರೆಜ್ ಬೀರುವನ್ನ ಕೊಡುಗೆಯಾಗಿ ನೀಡಿದ್ದಾರೆ. ಇಂದು ಶಾಲೆಯಲ್ಲಿ ಮಕ್ಕಳು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g