ಮಾರ್ಚ್ 24 ರಂದು ವಿಶ್ವ ಕ್ಷಯ ರೋಗ ಅಂಗವಾಗಿ ವಿವಿಧ ಜಾಗೃತಿ ಕಾರ್ಯಕ್ರಮ : ಡಾ|| ಬಾಲಕೃಷ್ಣ
1 min readಚಿಕ್ಕಮಗಳೂರು : ಮಾರ್ಚ್ 24 ರ ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಭಾ ಕಾರ್ಯಕ್ರಮ, ಜಾಗೃತಿ ಜಾಥ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಡಾ|| ಬಾಲಕೃಷ್ಣ ಹೇಳಿದ್ರು.
ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯ ನಂತರ ಮಾತನಾಡಿದ ಅವರು ಮಾರ್ಚ್ 24 ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುವುದು. ಇದರ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಭಾ ಕಾರ್ಯಕ್ರಮ, ಪ್ರಮುಖ ಸ್ಮಾರಕ ಕಟ್ಟಡಗಳಲ್ಲಿ ಕೆಂಪು ದೀಪ ಉರಿಸುವುದು, ಧ್ವನಿ ವರ್ಧಕ ಹಾಗೂ ಮುದ್ರಣ ಸಾಮಾಗ್ರಿಗಳಿಂದ ರೋಗದ ಬಗ್ಗೆ ಜಾಗೃತಿ, ಕ್ಷಯ ರೋಗದಿಂದ ಗುಣಮುಖರಾದ 5 ಜನರಿಗೆ ಟಿ.ಬಿ ಚಾಂಪಿಯನ್ ಶಿಪ್, ಕ್ಷಯ ರೋಗದ ನಿರ್ಮೂಲನೆಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ ಸನ್ಮಾನ, ಇಲಾಖಾ ಅಧಿಕಾರಿಗಳಿಗೆ ಸನ್ಮಾನ, ಹಾಗೂ ಜಾನಪದ ಕಲಾ ತಂಡಗಳ ಮೂಲಕ 11 ವಿವಿಧ ಸ್ಥಳಗಳಲ್ಲಿ ಕ್ಷಯ ರೋಗದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ರು.
ಇದೇ ವೇಳೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಲಜಾಕ್ಷಿ, ರ್ಕಾಕ್ರಮದ ಸಂಯೋಜಕರಾದ ಮುದಾಸಿರ್ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g