ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಗಾರರಲ್ಲಿ ಹೆಚ್ಚಿದ ಆತಂಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯ ಪ್ರವೇಶಕ್ಕೆ ಆಗ್ರಹ
1 min readಚಿಕ್ಕಮಗಳೂರು : ಆರ್ಥಿಕ ಆಸ್ತಿಗಳ ಸ್ಥೀರೀಕರಣ, ಪುನರಚನೆ ಮತ್ತು ಭಧ್ರತಾ ಹಿತಾಸಕ್ತಿಯಾದ ಸರ್ಫೇಸಿ ಕಾಯ್ದೆಯನ್ನು ಬಳಸಿಕೊಂಡು ಬ್ಯಾಂಕುಗಳು ನ್ಯಾಯಾಲಯದ ಮೂಲಕ ಸಾಲ ಪಡೆದಿರುವ ಬೆಳೆಗಾರರ ಕಾಫಿ ತೋಟಗಳನ್ನು ಕರಾಜು ಹಾಕುತ್ತಿದ್ದಾರೆ, ಇದರಿಂದ ಕಾಫಿ ಬೆಳೆಗಾರರು ಆತಂಕದಲ್ಲಿ ಬದುಕುವಂತಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಆಂಶುಮಂತ್ ಹೇಳಿದ್ರ, ಸುದ್ದಿಗೋಷ್ಠೀಯ ನಂತರ ಮಾತನಾಡಿದ ಅವರು ಅಕಾಲಿಕ ಮಳೆ, ಬೆಲೆ ಏರಿಳಿತ, ಹಾಗೂ ಪ್ರಕೃತಿ ವಿಕೋಪದ ಪರಿಣಾಮ ಕಾಫಿ ಬೆಳೆಳೆಗಾರರು ಸಂಕಷ್ಟದಲ್ಲಿದ್ದಾರೆ, ಈ ಹಿಂದ ಹಿರೇಕೊಳಲೆ ವ್ಯಾಪ್ತಿಯ ರಮೇಶ್ರಾವ್ರವರ ಯೂನಿಯನ್ ಬ್ಯಾಂಕ್ ನಿಂದ ಸಾಲಕ್ಕೆ ತೋಟನ್ನು ಜಪ್ತಿ ಮಾಡಿತ್ತು, ಇದರಿಂದ ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಸುಗ್ರಿವಾಜ್ಞೆಯಿಂದ ಸರ್ಫೇಸಿ ಕಾಯ್ದೆಯಿಂದ ಕಾಫಿ, ಮೆಣಸು, ರಬ್ಬರ್ ಸೇರಿದಂತೆ ತೋಟಗಾರಿಕ ಬೆಳೆಗಳ್ಳನ್ನು ಹೊರಗೆ ಇಡಬೇಕೆಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g