May 2, 2024

MALNAD TV

HEART OF COFFEE CITY

ಗುಡ್ಡೇತೋಟ ಗ್ರಾಮಸ್ಥರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಟನೆ

1 min read

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತೀವೃಷ್ಟಿಯಿಂದ ಹಾನಿ ಸಂಭವಿಸಿರುವ ಸ್ಥಳದ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಅತೀವೃಷ್ಟಿ ಸಂತ್ರಸ್ಥರು ರಸ್ತೆ ತಡೆದು ದಢೀರ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್‌ರೊಂದಿಗೆ ಮಲೆನಾಡು ಭಾಗದಲ್ಲಿ ಅತೀವೃಷ್ಟಿಯಿಂದ ಹಾನಿ ಸಂಭವಿಸಿರುವ ಪ್ರದೇಶಗಳ ಪರಿಶೀಲನೆ ಕೇಂದ್ರ ಸಚಿವೆ ಶೋಭಾ ತೆರಳಿದ್ದರು. ಈ ವೇಳೆ ಅವರು ಕೊಪ್ಪ ತಾಲ್ಲೂಕಿನ ಗುಡ್ಡೆತೋಟಕ್ಕೆ ತೆರಳಿ ಅಲ್ಲಿ ಧರೆಕುಸಿದು ಮನೆಗೆ ಹಾನಿಯಾಗಿದ್ದ ಸ್ಥಳ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸ್ಥಳದಲ್ಲಿ ಅಹವಾಲು ಹೇಳಿಕೊಳ್ಳಲು ನೆರೆದಿದ್ದ ಜನರನ್ನು ನಿರ್ಲಕ್ಷಿö್ಯಸಿ ಕಾರು ಏರಿ ಸ್ಥಳದಿಂದ ತೆರಳಿದರು. ಇದರಿಂದ ಕುಪಿತರಾದ ಸಂತ್ರಸ್ಥರು ಗುಡ್ಡೆತೋಟದಲ್ಲಿ ಹಾದು ಹೋಗಿರುವ ಶೃಂಗೇರಿ-ಹೊರನಾಡು ರಸ್ತೆ ತಡೆದು ಕೆಲ ಹೊತ್ತು ಪ್ರತಿಭಟನೆ ನಡೆಸಿ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ರತೀ ಮಳೆಗಾಲದಲ್ಲಿ ಈ ಭಾಗದಲ್ಲಿ ಗುಡ್ಡ ಕುಸಿಯುವುದು ಸಾಮಾನ್ಯವಾಗಿದೆ. ಇದರಿಂದ ಇಲ್ಲಿರುವ ಮನೆಗಳ ಸದಸ್ಯರು ಮಳೆಗಾಲದ ೬ ತಿಂಗಳುಗಳ ಕಾಲ ಜೀವಭಯದಲ್ಲೇ ಬದು ಕುತ್ತಿದ್ದೇವೆ. ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಲು ಅನೇಕ ಬಾರೀ ಜಿಲ್ಲಾಡಳಿತ, ತಾಲ್ಲೂಕು ಆಡಳಿತವನ್ನು ಆಗ್ರಹಿಸಿದ್ದರೂ ಪರಿಹಾರ ಒದಗಿಸಿಲ್ಲ. ಈ ಬಾರೀ ಇಲ್ಲಿ ಹಲವು ಮನೆಗಳಿಗೆ ಭೂಕುಸಿತದಿಂದ ಹಾನಿಯಾಗಿದೆ ಎಂದರು.

ಸoತ್ರಸ್ಥರೊಬ್ಬರು ಮಾತನಾಡಿ, ಭೂ ಕುಸಿತದಿಂದಾಗಿ ವಾಸವಿದ್ದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅಧಿಕಾರಿಗಳು ಕುಟುಂಬಕ್ಕೆ ಸದ್ಯ ಅಂಗನವಾಡಿ ಕೇಂದ್ರದಲ್ಲಿ ಆಶ್ರಯ ನೀಡಿ ದ್ದಾರೆ. ಮಂಗಳವಾರ ಹಾನಿ ವೀಕ್ಷಣೆಗೆ ಬಂದಿದ್ದ ಸಚಿವೆ ಶೋಭಾ ಅವರು ನಮ್ಮ ಸಮಸ್ಯೆ ಆಲಿಸದೇ ಕಾರು ಹತ್ತಿ ಹೋಗಿದ್ದಾರೆ. ಓಟು ಕೇಳಲು ಐದು ವರ್ಷಕ್ಕೊಮ್ಮೆ ಬರುವ ಇವರಿಗೆ ಬಡವರ ಕಷ್ಟಗಳ ಬಗ್ಗೆ ಕರುಣೆ ಇಲ್ಲ ಎಂದು ದೂರಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!