ಮೂಡಿಗೆರೆ ಪಟ್ಟಣದಲ್ಲಿ ವಿದ್ಯಾರ್ಥಿಗಳಿಗಾಗಿ ತರಬೇತಿ ಶಿಬಿರ ಕಾರ್ಯಗಾರ
1 min read
ಮೂಡಿಗೆರೆ : ವಿದ್ಯಾರ್ಥಿಗಳಿಗೆ ಪೂರ್ವಬಾವಿ ತರಬೇತಿ ಶಿಬಿರ ಕಾರ್ಯಗಾರವನ್ನ ನವರತ್ನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ನಾಗರತ್ನ ಉದ್ಘಾಟಿಸಿದರು. ಮೂಡಿಗೆರೆ ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿರುವ ದೀನ್ ದಯಾಳ್ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ನಾಗರತ್ನ ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ, ಹಾಗಾಗಿ ವಿದ್ಯೆಗೆ ಏನಾದರು ಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗಾಗಿ ಈ ಸಂಸ್ಥೆ ತೆರದು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇವೆ, ಟೈಲರಿಂಗ್ ಸೇರಿದಂತೆ ವಿವಿಧ ಶಿಕ್ಷಣದ ಕೋರ್ಸ್ ಗಳನ್ನ ಉಚಿತವಾಗಿ ನೀಡಬೇಕೆಂಬ ಒಂದೇ ಒಂದು ಆಸೆಯಿಂದ ಈ ತರಬೇತಿ ನೀಡುತ್ತಿದ್ದೇವೆ. ನಮ್ಮ ಸಂಸ್ಥೆ ನೀಡುತ್ತಿರುವ ಟೈಲರಿಂಗ್ ತರಬೇತಿಯನ್ನ ನೀವು ಸದುಪಯೋಗಪಡಿಸಿಕೊಳ್ಳಬೇಕೆಂದು
ವಿದ್ಯಾರ್ಥಿಗಳಿಗೆ ನಾಗರತ್ನ ಸಲಹೆ ನೀಡಿದ್ದರು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತಾನಾಡಿದ ಪುನೀತ್ ಮೂಡಿಗೆರೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ವಿವಿಧ ಕಾರ್ಯಗಳನ್ನ ಕೈಗೊಂಡಿದ್ದೇವೆ, ಅದರಂತೆ ನಮ್ಮ ಸಂಸ್ಥೆ ಟೈಲರಿಂಗ್ ಸೇರಿದಂತೆ ವಿವಿಧ ಉಚಿತ ಕೋರ್ಸ್ ಗಳನ್ನ ನೀಡುತ್ತಿದ್ದೇವೆ, ಮುಂದೆಯೂ ನಮ್ಮ ಸೇವೆ ನಿರಂತರವಾಗಿದೆ ಎಂದರು. ಇನ್ನು ಕಾರ್ಯಕ್ರಮ ದಲ್ಲಿ ಖ್ಯಾತ ನಿರೂಪಕಿ ಸೌಮ್ಯಶ್ರೀ, ಬಿಜಿಎಸ್ ಪ್ರಾಂಶುಪಾಲರಾದ ಮಂಜುನಾಥ್, ನಿವೃತ್ತ ಪ್ರಾಂಶುಪಾಲರಾದ ದೇವಪ್ಪ ಮತ್ತಿತ್ತರು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g