ಹುಲಿ ಉಗುರು ಪ್ರಕರಣ; ಅರಣ್ಯ ಅಧಿಕಾರಿ ‘ದರ್ಶನ್’ ಅಮಾನತು
1 min readಚಿಕ್ಕಮಗಳೂರು: ಹುಲಿ ಉಗುರಿನ ಹುರುಳಲ್ಲಿ ಸಿಲುಕಿದ್ದ ಕಳಸದ ಅರಣ್ಯ ಅಧಿಕಾರಿ ದರ್ಶನ್ ತನಿಖೆಗೆ ಹಾಜರಾಗದ ಹಿನ್ನೆಲೆ ಅವರನ್ನು ಅಮಾನತು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರುನಲ್ಲಿ ನಡೆದಿದೆ.
ಕಾಫಿನಾಡಿನಲ್ಲಿ ಹುಲಿ ಉಗುರಿನ ಕಂಟಕ ಎದುರಾಗಿದ್ದು, ಇದೀಗ ಅದೇ ಸಾಲಿನಲ್ಲಿ ಅರಣ್ಯ ಅಧಿಕಾರಿ ಒಬ್ಬರ ಹುಲಿ ಉಗುರು ಧರಿಸಿರುವುದಾಗಿ ಆರೋಪ ಕೇಳಿಬಂದಿತ್ತು ಈ ಹಿನ್ನಲೆ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು ಆದರೆ ಡಿ.ಆರ್.ಎಫ್.ಓ. ದರ್ಶನ್ ಹಾಜರಾಗದ ಕಾರಣ ಕೊಪ್ಪ ಡಿ.ಎಫ್.ಓ. ನಂದೀಶ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಳಸದ ಡಿ.ಆರ್.ಎಫ್.ಓ. ದರ್ಶನ್ ಅವರು ಹುಲಿ ಉಗುರು ಧರಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ದರ್ಶನ್ ಚಿಕ್ಕಮಗಳೂರು ತಾಲೂಕು ಆಲ್ದೂರು ಮೂಲದವರು. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮೇಲೆ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರು ಲಿಖಿತ ದೂರು ನೀಡಿದ್ದರು. ಇವರು ಹುಲಿ ಉಗುರು ಧರಿಸಿದ್ದು ಸೂಕ್ತ ಕ್ರಮ ಕೈಗೊಂಡು, ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ಹೇಳಿದ್ದರು. ಈ ಆಧಾರದ ಮೇಲೆ ತನಿಖೆ ನಡೆಸಿ, ಕ್ರಮ ತೆಗೆದು ಕೊಂಡಿರುವುದಾಗಿ ಕೊಪ್ಪ ಡಿ.ಎಫ್.ಓ. ನಂದೀಶ್ ಹೇಳಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g