May 17, 2024

MALNAD TV

HEART OF COFFEE CITY

ದೇವಸ್ಥಾನದ ಜಾಗ, ಕಟ್ಟಿದ ಮನೆ ಕೆಡವಿದ ಗ್ರಾಮಸ್ಥರು

1 min read

ದೇವಸ್ಥಾನದ ಜಾಗ ಎಂದು ಕಟ್ಟಿದ್ದ ಮನೆಯನ್ನ ಇಡೀ ಊರಿನ ಜನ ಸೇರಿ ಹೆಂಚನ್ನು ತೆಗೆದು ಕೆಡವಲು ಮುಂದಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎರೇಹಳ್ಳಿ ತಾಂಡ್ಯದಲ್ಲಿ ನಡೆದಿದೆ. ಎರೆಹಳ್ಳಿ ತಾಂಡ್ಯದ ನಿವಾಸಿ ರಾಮಾ ಭೋವಿ ಎಂಬುವರು ವಾಸಕ್ಕೆಂದು ಮನೆ ಕಟ್ಟಿಕೊಂಡಿದ್ದರು. ಆದರೆ, ಊರಿನ ಜನ ಇದು ದೇವಸ್ಥಾನದ ಜಾಗ. ಇಲ್ಲಿ ಏಕೆ ಮನೆ ಕಟ್ಟಿದ್ದೀಯ ಎಂದು ಮನೆಯ ಮೇಲ್ಚಾವಣಿಗೆ ಹೊದಿಸಿದ್ದ ಹೆಂಚುಗಳನ್ನ ಸಂಪೂರ್ಣವಾಗಿ ಕೆಳಗೆ ಇಳಿಸಿದ್ದಾರೆ. ಮನೆ ಕೆಡವಲು ಮುಂದಾಗಿದ್ದಾರೆ.‌ ಆದರೆ, ಸದ್ಯಕ್ಕೆ ಮನೆಯನ್ನ ಇನ್ನು ಬೀಳಿಸಿಲ್ಲ. ರಾಮಾಭೋವಿ ವಾಸಕ್ಕೆ ಮನೆ ಇಲ್ಲ ಎಂದು ತಾಂಡ್ಯಾದಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಆದರೆ, ಈಗ ರಾಮಾಭೋವಿ ಮನೆ ಕಟ್ಟಿಕೊಂಡಿದ್ದ ಜಾಗ ದೇವಸ್ಥಾನದ್ದು ಎಂದು ಸರ್ಕಾರಿ ದಾಖಲೆಯಲ್ಲಿ ತೋರಿಸುತ್ತಿದೆ. ಹಾಗಾಗಿ, ಎರೇಹಳ್ಳಿ ತಾಂಡ್ಯದ ಗ್ರಾಮಸ್ಥರು ದೇವಸ್ಥಾನದ ಜಾಗದಲ್ಲಿ ಮನೆ ಕಟ್ಟಿದ್ದೀಯ ಎಂದು ಮನೆಯನ್ನ ಸಂಪೂರ್ಣವಾಗಿ ತೆಗೆಯಲು ತೀರ್ಮಾನಿಸಿದ್ದಾರೆ. ತಾಂಡ್ಯದ ಜನರೆಲ್ಲಾ ಸೇರಿ ಮನೆ ಮೇಲೆ ಹತ್ತಿ ಹಂಚುಗಳನ್ನ ಸಂಪೂರ್ಣವಾಗಿ ಕೆಳಗೆ ಇಳಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಾಮಾಭೋವಿ ಹೊಟ್ಟೆ ಬಟ್ಟೆ ಕಟ್ಟಿ ಮನೆ ಕಟ್ಟಿಕೊಂಡಿದ್ದರು. ಆ ಮನೆಗೆ ಸರಿಯಾಗಿ ಗೋಡೆಗಳು ಕೂಡ ಇರಲಿಲ್ಲ. ಸೋಗೆ ಗರಿಯನ್ನು ಮಳೆ ಬಂದರೆ ಒಳಗಡೆ ನೀರು ಬರದಂತೆ ಅಡ್ಡಲಾಗಿ ಕಟ್ಟಿಕೊಂಡಿದ್ದರು. ಆದರೆ, ತಾಂಡ್ಯದ ಜನ ಇದು ದೇವಸ್ಥಾನದ ಜಾಗ ಎಂದು ಮನೆಯಲ್ಲಿ ಕೆಡವಲು ಮುಂದಾಗಿದ್ದಾರೆ. ಸದ್ಯಕ್ಕೆ ಹೆಂಚು ತೆಗೆದಿದ್ದಾರೆ. ಆದರೆ, ಮನೆಯನ್ನ ಕೆಡವುತ್ತಾರೋ ಇಲ್ಲವೋ ಕಾದುನೋಡಬೇಕು. ರಾಮಾಭೋವಿ ಮನೆಯನ್ನ‌ ಬೀಳಿಸೋದು ಬೇಡ ಎಂದು ಮನವಿ ಮಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!