May 20, 2024

MALNAD TV

HEART OF COFFEE CITY

ದತ್ತಪೀಠದಲ್ಲಿ ಹೋಮಕ್ಕೆ ಅವಕಾಶ ನೀಡದ್ದಕ್ಕೆ ಸಂಘ ಪರಿವಾರ ಆಕ್ರೋಶ.. ಡಿ.ಸಿ, ಎಸ್ಪಿ ಕಚೇರಿ ಬಳಿ ಭಾರೀ ಹೈಡ್ರಾಮ..!

1 min read

ಚಿಕ್ಕಮಗಳೂರು: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಹೋಮಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹೋಮ ನಡೆಸಿ ಪ್ರತಿಭಟನೆ ನಡೆಸುವ ವೇಳೆ ಬಾರಿ ಹೈಡ್ರಾಮ ನಡೆದಿದೆ. ಪೊಲೀಸರೆದುರೇ ಜಿಲ್ಲಾಧಿಕಾರಿ ಕಚೇರಿ ಒಳಗೆ ನುಗ್ಗಿ ಕೋಲಹಲ ಸೃಷ್ಟಿಸಲು ಕೆಲವರು ಯತ್ನಿಸಿದ ವೇಳೆ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಾದ್ಯಂತ ಇಂದು ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಪೂಜೆಗೆ ಅವಕಾಶ ನೀಡಿದ್ದು, ದತ್ತಾಪೀಠದಲ್ಲೂ ಪೂಜೆಗೆ ಅವಕಾಶ ನೀಡಬೇಕೆಂದು ವಿ ಎಚ್ ಪಿ ಭಜರಂಗದಳ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಹೊರಗೆ ಹೋಮ ಕುಂಡ ನಿರ್ಮಿಸಿ ಪ್ರತಿಭಟನೆ ನಡೆಸುವ ವೇಳೆ ಬಾರಿ ಹೈಡ್ರಾಮ ನಡೆಯಿತು. ದತ್ತಪೀಠಕ್ಕೆ ತೆರಳಲು ಮುಂದಾದ ಹಿಂದೂ ಕಾರ್ಯಕರ್ತರನ್ನ ತಡೆಯಲು ಮುಂದಾದ ವೇಳೆ ಕೆಲ ಕಾರ್ಯಕರ್ತರು ಡಿಸಿ ಕಚೇರಿ ಒಳಗೆ ನುಗ್ಗಿದ್ರು ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಾರಿ ಹೈಡ್ರಾಮ ನಡೆಯಿತು. ವಿ ಎಚ್ ಪಿ ಜಿಲ್ಲಾಧ್ಯಕ್ಷ ಸ್ಥಳದಲ್ಲೇ ದತ್ತಪೀಠ ಛಲೋ ಆರಂಭಿಸಿದರು. ಈ ವೇಳೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ತಪ್ಪಿಸಿಕೊಂಡ ಕೆಲವರು ತೊಗರಿ ಅಂಕಲ್ ಸರ್ಕಲ್ ನಲ್ಲಿ ವಾಹನ ತಡೆದು ಪ್ರತಿಭಟನೆಗೆ ಮುಂದಾದರು. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ನಡುವೆ ಪೊಲೀಸರು ನಿಷ್ಕ್ರಿಯರಾದಂತೆ ಕಾಣಿಸಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!