May 17, 2024

MALNAD TV

HEART OF COFFEE CITY

1 min read

ಚಿಕ್ಕಮಗಳೂರು: ರಾಮಭಕ್ತರ ಮೇಲೆ ಕೆಂಗಣ್ಣು ಬೀರಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ದತ್ತಭಕ್ತರ ಮೇಲೂ ತನ್ನ ದೃಷ್ಟಿ ಬೀರಿದೆ.

31 ವರ್ಷಗಳ ಬಳಿಕ ಹುಬ್ಬಳ್ಳಿ ಕರಸೇವಕರ ಕೇಸ್ ರೀ ಓಪನ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ರೀ ಓಪನ್ ಆಗಿದೆ. ಕಾಂಗ್ರೆಸ್ ಸರ್ಕಾರದಿಂದ ಹಳೇ ಕೇಸ್ ಗಳ ರೀ ಓಪನ್ ಮಾಡಲಾಗಿದೆ. ದತ್ತಪೀಠ ಹೋರಾಟಗಾರ ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ. 2017ರಲ್ಲಿ ದತ್ತಪೀಠದಲ್ಲಿ ಗೋರಿ ಒಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷಗಳ ಬಳಿಕ ಮತ್ತೆ ಹಳೇ ಕೇಸ್ ರೀ ಓಪನ್ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಕ್ಲೋಸ್ ಆಗಿದ್ದ ಪ್ರಕರಣ ಇದೀಗ ಕೇಸ್ ರೀ ಓಪನ್ ಆಗಿದೆ. 14 ಜನರ ಮೇಲಿನ ಕೇಸ್ ರೀ ಓಪನ್ ಆಗಿದ್ದು, ಹಿಂದು ಸಂಘಟನೆ ಮುಖಂಡ ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್ ರಾಮು ಮೇಲಿನ ಕೇಸ್ ರೀ ಓಪನ್ ಮಾಡಲಾಗಿದೆ. ಇದೇ ಜನವರಿ 8ನೇ ತಾರೀಕು ಕೋರ್ಟಿಗೆ ಹಾಜರಾಗುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ. 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!