May 17, 2024

MALNAD TV

HEART OF COFFEE CITY

24 ಗಂಟೆಯೊಳಗೆ ಆರೋಪಿಯನ್ನ ಬಂಧಿಸಿದ ಪೊಲೀಸರು..!

1 min read

ಚಿಕ್ಕಮಗಳೂರು: ಆಲ್ದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ತೋರಣಮಾವು ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೆಂಚು ತೆಗೆದು ಒಳಪ್ರವೇಶಿಸಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡಿದ್ದ ಆರೋಪಿಯನ್ನ 24 ಗಂಟೆಯೊಳಗಾಗಿ ಪೊಲೀಸರು ಬಂಧಿಸಿದ್ದಾರೆ.

ತೋರಣಮಾವು ಗ್ರಾಮದ ಮನೆಯೊಂದರಲ್ಲಿ ನವೆಂಬರ್ 1 ರಂದು ಯಾರು ಇಲ್ಲದ ಸಮಯದಲ್ಲಿ ಹೆಂಚು ತೆಗೆದು ಕಳ್ಳನೊಬ್ಬ ಮನೆಯ ಒಳಪ್ರವೇಶ ಮಾಡಿದ್ದಾನೆ. ಮನೆಯಲ್ಲಿದ್ದ ರೂ. 90 ಸಾವಿರ ಮೌಲ್ಯದ 15 ಗ್ರಾಂ ಚಿನ್ನದ ಓಲೆ, ಜುಮುಕಿ ಮತ್ತು ಸರವನ್ನು ಕಳವು ಮಾಡಿದ್ದಾನೆ. ಈ ಪ್ರಕರಣ ಸಂಬಂಧ ಆಲ್ದೂರು ಪೊಲೀಸರಿಗೆ ದೂರು ಸಹ ನೀಡಲಾಗಿತ್ತು. ಆಲ್ದೂರು ಪೊಲೀಸರು ಚುರುಕಿನ ಕಾರ್ಯಾಚರಣೆ ಮಾಡಿ 24 ಗಂಟೆಯೊಳಗಾಗಿ ಆರೋಪಿ ಶಾಂತಪ್ಪ @ ಸಂಪತ್ ಕುಮಾರ @ ಪಾಪಿ ಎಂಬುವವನನ್ನು ವಶಕ್ಕೆ ಪಡೆದು, ಕಳವು ಮಾಡಿದ್ದ ಸ್ವತ್ತನ್ನು ವಶಪಡಿಸಿಕೊಂಡಿರುತ್ತಾರೆ. ಮೇಲ್ಕಂಡ ಪ್ರಕರಣವನ್ನು ಪಿ.ಎಸ್.ಐ. ಕೀರ್ತಿಕುಮಾರ ಹೆಚ್ ಡಿ, ಪಿ.ಎಸ್.ಐ. ಅಕ್ಷಿತಾ ಕೆ. ಪಿ, ಎ.ಎಸ್.ಐ, ಸತೀಶ ಕೆ ಮತ್ತು ಹೆಚ್.ಸಿ. ಚಂದ್ರಪ್ಪ ನವರ ತಂಡ ಪತ್ತೆ ಮಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!