ಭೀಕರ ಬರಕ್ಕೆ ಮಲೆನಾಡಿಗರು ತತ್ತರ..!ಅಯ್ಯೋ .. ದೇವರೇ… ರೈತರ ಕಣ್ಣೀರು ಕೇಳೋರು ಯಾರು..?
1 min readಚಿಕ್ಕಮಗಳೂರು: ಮಲೆನಾಡಲ್ಲಿ ಮಳೆಗೆ ಈ ವರ್ಷ ಬರ ಬಂದಿದೆ. ವಾರ್ಷಿಕ ದಾಖಲೆ ಮಳೆ ಸುರಿಯೋ ಮಲೆನಾಡಲ್ಲಿ ಈ ಬಾರಿ ಶೇಕಡ 45 ರಷ್ಟು ಮಳೆ ಕೊರತೆ ಎದುರಾಗಿದ್ದು ರೈತ ಸಮುದಾಯವೇ ಆತಂಕದಲ್ಲಿದೆ. ಇನ್ನು ಬೆಳೆದ ಬೆಳೆಗಳು ಒಣಗಿ ಹೋಗಿದ್ದು ರೈತರು ಕಣ್ಣೀರಿಡುವಂತಹ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರ್ಮಾಣ ವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅಪ್ಪಟ ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ಭಾಗವನ್ನ ಹೊಂದಿದೆ. ಈ ಬಾರಿ ಮೂರು ಭಾಗದಲ್ಲೂ ಮಳೆ ಕೈಕೊಟ್ಟಿದ್ದು ಮಳೆಗಾಗಿ ಜನ ಆಕಾಶ ನೋಡ್ತಾ ಇದ್ದಾರೆ.
ವಾರ್ಷಿಕ ದಾಖಲೆ ಮಳೆ ಬೀಳೋ ಮೂಡಿಗೆರೆಯಲ್ಲಿ ಈ ವರ್ಷ ಅರ್ಧಕರ್ಧ ಮಳೆ ಕೊರತೆ ಎದುರಾಗಿದೆ. ಅದರಲ್ಲೂ ಈ ವರ್ಷ ಮಳೆ ಕೊರತೆ ಮಲೆನಾಡಿಗರು ಇತಿಹಾಸದಲ್ಲಿ ಕಾಣದ ಬರವನ್ನ ಕಂಡಿದ್ದಾರೆ. ಸರ್ಕಾರ ಜಿಲ್ಲೆಯ 8 ತಾಲೂಕನ್ನ ಬರ ಪೀಡಿತ ಪ್ರದೇಶ ಘೋಷಣೆ ಮಾಡಿದೆ. ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ, ಎನ್.ಆರ್.ಪುರ, ಶೃಂಗೇರಿ,ಮೂಡಿಗೆರೆ, ಕೊಪ್ಪ, ಕಳಸ ತಾಲೂಕನ್ನ ಬರ ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಹನಿ ನೀರಿಗೂ ಹಾಹಾಕಾರ ಅನುಭವಿಸುವಂತಾಗಿದೆ. ಭತ್ತದ ಗದ್ದೆಗಳನ್ನ ಪಾಳುಬಿಟ್ಟಿದ್ದು ಇದ್ದ ಭತ್ತದ ಗದ್ದೆಗಳು ಒಣಗಿ ಹೋಗ್ತಿವೆ, ಇನ್ನು ರಾಗಿ, ಮೆಕ್ಕೆ ಜೋಳ, ಭತ್ತ, ಹತ್ತಿ, ಸೂರ್ಯಕಾಂತಿ, ಈರುಳ್ಳಿ, ಆಲೂಗೆಡ್ಡೆ, ಮೆಣಸಿನಕಾಯಿ, ಕಡ್ಲೇಕಾಯಿ ಸೇರಿದಂತೆ ವಿವಿಧ ಬೆಳೆಗಳು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿವೆ. ನಾಡಿಗೆ ನೀರು ನೀಡುವ ಮಲೆನಾಡಿಗರಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು ರೈತರ ಬದುಕು ಹೇಳತೀರದಂತಾಗಿದೆ. ಕಾಫಿನಾಡಲ್ಲಿ ಈ ವರ್ಷ ಭೀಕರ ಬರ ಎದುರಾಗಿದೆ. ಅದ್ರಲ್ಲೂ ಮಲೆನಾಡಿನಲ್ಲೂ ಮಳೆ ಇಲ್ದೆ ಇರೋದು ನಿಜಕ್ಕೂ ಆಶ್ಚರ್ಯ ತರಿಸಿದೆ. ಭೀಕರ ಬರಕ್ಕೆ ತತ್ತರಿಸಿದ ರೈತರು ತತ್ತರಿಸಿ ಹೋಗಿದ್ದಾರೆ. ಮಳೆ ಕೊರತೆಯಿಂದ ಬೆಳೆ ಒಣಗಿ ಹೋಗ್ತಿದ್ದು ರೈತರ ಬದುಕು ಶೋಚನೀಯ ವಾಗಿದೆ. ಭೀಕರ ಬರಕ್ಕೆ ಚಿಕ್ಕಮಗಳೂರು ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಅನ್ನದಾತರು ಮಳೆರಾಯನ ನಂಬಿ ಆಶಾವಾದದಲ್ಲಿ ಲಕ್ಷಾಂತರ ಖರ್ಚು ಮಾಡಿ ಬೆಳೆದ ಬೆಳೆಗಳು ಬಿಸಿಲಿನ ಜಳಕ್ಕೆ ಸುಟ್ಟು ಹೋಗಿವೆ. ಮಳೆರಾಯ ಕೈಕೊಟ್ಟ ಹಿನ್ನೆಲೆ ಸಾವಿರಾರು ರೈತರು ಬೀದಿಗೆ ಬೀಳುವಂತಾಗಿದೆ.
ಜಿಲ್ಲೆಯಲ್ಲಿ ಬೆಳೆ ನಾಶ :
ರಾಗಿ ಬೆಳೆ :-
ಕಡೂರು : 34831 ಹೆಕ್ಟೇರ್ ನಷ್ಟು ಹಾನಿ, ಅಜ್ಜಂಪುರ : 7820 ಹೆಕ್ಟೇರ್ ನಷ್ಟು ಬೆಳೆ ಹಾನಿ
ಮೆಕ್ಕೆಜೋಳ :-
ಕಡೂರು : 2855 ಹೆಕ್ಟೇರ್ ಬೆಳೆ ಹಾನಿ, ಅಜ್ಜಂಪುರ : 1469 ಹೆಕ್ಟೇರ್ ಬೆಳೆ ಹಾನಿ
ಹತ್ತಿ :-
ಕಡೂರು : 846 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಭತ್ತ :-
ಕಳಸ : 515 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಕೊಪ್ಪ : 2450 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಶೃಂಗೇರಿ : 1296 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಎನ್.ಆರ್.ಪುರ : 2009 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಈರುಳ್ಳಿ :-
ಕಡೂರು : 1906 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಅಜ್ಜಂಪುರ : 3150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಆಲೂಗಡ್ಡೆ :-
ಕಡೂರು : 593 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, ಅಜ್ಜಂಪುರ : 70 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
ಜಿಲ್ಲೆಯಲ್ಲಿ ವಾರ್ಷಿಕ ಮಳೆ ಪ್ರಮಾಣ :-
- ವಾರ್ಷಿಕ ಮಳೆಯಾಗಬೇಕಾಗಿದ್ದ ಮಳೆ : 1677 ಮಿ.ಮಿ
- ಈವರೆಗೂ ಆಗಿರುವ ಮಳೆ : 1030 ಮಿ.ಮಿ
- ಮಳೆ ಕೊರತೆ : 39 ರಷ್ಟು ಮಳೆ ಕೊರೆತ ಜಿಲ್ಲೆಯಲ್ಲಿ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g