ವಿದ್ಯುತ್ ಪ್ರಸರಣಾ ನಿಗಮದ ಕೇಂದ್ರ ಕಾರ್ಯಕಾರಿ ಸಮಿತಿಗೆ ಜಿಲ್ಲೆಯ ಇಬ್ಬರು ಆಯ್ಕೆ
1 min readಚಿಕ್ಕಮಗಳೂರು :13 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ರಾಜ್ಯ ನೌಕರರ ಸಂಘದ ಕೇಂದ್ರೀಯ ಕಾರ್ಯಕಾರಿ ಸಮಿತಿಗೆ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಎನ್.ಆರ್ .ಪುರ ಕೊಪ್ಪ , ಬಾಳೆಹೊನ್ನೂರು, ಮೂಡಿಗೆರೆ ಮತ್ತು ಚಿಕ್ಕಮಗಳೂರು ವಿಭಾಗದಿಂದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರೀಯ ಕಾರ್ಯಕಾರಿ ಸಮಿತಿಗೆ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಹೆಚ್.ಎಸ್ ಸತೀಶ್ ಮತ್ತು ವಿ .ಐ .ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಂಪನಹಳ್ಳಿ ರಸ್ತೆಯಲ್ಲಿರುವ ಕೆಇಬಿ ಕಚೇರಿಯಲ್ಲಿ ರಾಜ್ಯ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘದ ಸದಸ್ಯರುಗಳು ಚುನಾವಣೆಯಲ್ಲಿ ವಿಜೇತರಾದ ಸತೀಶ್ ಹಾಗೂ ಲೋಕೇಶ್ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿದರು ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ನೌಕರರ ಒಗ್ಗಟ್ಟು ಪ್ರದರ್ಶಿಸಿದರು.
ಇದೇ ವೇಳೆ ಮಾತನಾಡಿದ ಹೆಚ್.ಎಸ್ ಸತೀಶ್ ಹಾಗೂ ವಿ .ಐ .ಲೋಕೇಶ್ ಇದು ನನ್ನ ಜಯ ಅಲ್ಲ ನಮ್ಮ ನೌಕರರ ಸಂಘದ ಜಯ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ವಿದ್ಯುತ್ ಪ್ರಸರಣ ನಿಗಮ ಖಾಸಗಿಕರಣ ವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಷ್ಟ ಎದುರಿಸಬೇಕಾಗುವುದು ನಾವುಗಳೆಲ್ಲಾ ಒಗ್ಗಟ್ಟಾಗಿರಬೇಕು ಇದೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಖಾಸಗೀಕರಣದಿಂದ ತಪ್ಪಿಸಿಕೊಳ್ಳಬಹುದು. ನಾವುಗಳೆಲ್ಲಾ ಸರ್ಕಾರದ ಅಧೀನದಲ್ಲೇ ಕೆಲಸ ಮಾಡಲು ಇಚ್ಚಿಸುತ್ತೇವೆ. ಅಲ್ಲದೆ ನಮ್ಮ ಜಿಲ್ಲೆ ಮಲೆನಾಡು ಅತಿ ಹೆಚ್ಚು ಮಳೆಯಾಗುವ ಭಾಗ ಗುಡ್ಡಗಾಡು ಅರಣ್ಯದಿಂದ ಕೂಡಿದ್ದು ಇನ್ನಷ್ಟು ನೌಕರರನ್ನು ನೇಮಕ ಮಾಡಬೇಕಾಗಿದೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ನೌಕರರ ಕೊರತೆ ಬಗ್ಗೆ ಮಾಹಿತಿ ತಿಳಿಸಿದ್ದೇವೆ ಸಂಬAಧಪಟ್ಟ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g