“ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ” ಎಂದು ಶಾಸಕ ಸಿ,ಟಿ ರವಿ ಹೇಳಿದ್ಯಾಕೆ…!?
1 min readಚಿಕ್ಕಮಗಳೂರು : ಕಾಂಗ್ರೆಸ್ ಉರಿಯುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು. ಅಲ್ಲಿಗೆ ಹೋದವರ ಭಸ್ಮ ಮಾಡುತ್ತೆ ಅನ್ನೋದು ಅವರ ಉದ್ದೇಶ. ಕಾಂಗ್ರೆಸಲ್ಲಿ ಇದ್ದೋರಿಗೆ ನೆಲೆ ಇಲ್ಲ, ಹಗಲು ಗನಸು ಕಾಣ್ತಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಅವರು ಇಂದು ಕಾಂಗ್ರೆಸ್ ಬಿಟ್ಟು ಬಂದ 14 ಜನರಿಗೆ ಡಿಕೆಶಿ ಫೋನ್ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ದೇಶದ ಉದ್ಧಗಲಕ್ಕೂ ತುಂಬಾ ಜನ ಕಾಂಗ್ರೆಸ್ ಬಿಡ್ತಿದ್ದಾರೆ, ಯಾರು ಸೇರ್ತಾರೆ. ರಾತ್ರಿ ಕನಸು ಬಿದ್ರೆ ಸ್ವಾಭಾವಿಕ, ಹಗಲುಗನಸು ಬಿದ್ರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಯಾರಿಗೆ ಕೇಳಿ ಬಿಜೆಪಿ ಅಧಿಕಾರದಲ್ಲಿದೆ, ಚುನಾವಣೆಗೆ ಇನ್ನೂ 2 ವರ್ಷವಿದೆ, ಈಗಲೇ ಸಿ.ಎಂ ಕುರ್ಚಿಗೆ ಕಿತ್ತಾಡುತ್ತಿದ್ದಾರೆ. ಇಲ್ಲದೆ ಇರುವ ಸಿ.ಎಂ ಕುರ್ಚಿಗೆ ಕಿತ್ತಾಡುವ ಸ್ಥಿತಿಯಲ್ಲಿ ಯಾರು ಹೋಗುತ್ತಾರೆ. ಇಲ್ಲದಿರುವ ಸಿಎಂ ಕುರ್ಚಿಗೆ ಕಿತ್ತಾಡುವ ಸ್ಥಿತಿಯಲ್ಲಿರುವಾಗ ಯಾರು ಹೋಗ್ತಾರೆ. ಯಾರು ಕೂಡ ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದಿಲ್ಲ. ಬಂದಿರುವವರು ಕಾಂಗ್ರೆಸ್ ಬೇಡ ಅಂತ ಬಂದಿರೋರು, ಮತ್ತೆ ಹೋಗ್ತಾರಾ ? ತುಂಬಾ ಜನ ಕಾಂಗ್ರೆಸ್ಸಿಗರೆ ದೇಶದ ಉದ್ಧಗಲಕ್ಕೂ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಯಾರಿಗೆ ಸಮಾಜ ಮತ್ತು ಪಕ್ಷಕ್ಕೆ ಶಕ್ತಿ ತುಂಬುವ ಶಕ್ತಿ ಸಾಮಾರ್ಥ್ಯ ಇದೆಯೋ ಅವರನ್ನು ಸೇರಿಸಿಕೊಳ್ತೇವೆ. ಎಂದು ಟಾಂಗ್ ಕೊಟ್ಟರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g