ಬಸ್ ಓಡಿಸುವ ವಿಚಾರಕ್ಕೆ ಸಾರಿಗೆ ಅಧಿಕಾರಿಗಳಿಗೂ ಹಾಗೂ ಖಾಸಗಿ ಬಸ್ ಮಾಲೀಕರ ನಡುವೆ ಮಾತಿನ ಚಕಮಕಿ
1 min readಚಿಕ್ಕಮಗಳೂರು : ಹನುಮಂತ ಬಾಲ ಜಗಿಯುವಾಗ ಪೂಜಾರಿ ಶ್ಯಾವಿಗೆ ಕೇಳಿದಂತಾಗಿದೆ ಖಾಸಗಿ ಬಸ್ ಚಾಲಕರ ಪರಿಸ್ಥಿತಿ. ಅತ್ತ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗಾಂದಿ ಉದ್ಯಾನವನದಲ್ಲಿ ಅನಿರ್ದಿಷ್ಠಾವದಿ ಬಂದ್ ನಡೆಸ್ತಿದ್ರೆ, ಇತ್ತ ಸಿಕ್ಕ ಅವಕಾಶವನ್ನು ಖಾಸಗಿ ಬಸ್ ಚಾಲಕರು ಜಿಲ್ಲಾಧಿಕಾರಿಗಳ ಆದೇಶದಂತೆ ಚಿಕ್ಕಮಗಳೂರು ಸರ್ಕಾರಿ ಬಸ್ ನಿಲ್ದಾಣ ಬಳಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಬಸ್ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳ ಹಾಗೂ ಖಾಸಗಿ ಬಸ್ ಚಾಲಕರು, ನಿವಾಹಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಬಸ್ ನೀವು ಓಡಿಸಿ, ಇಲ್ಲ ನಮಗೆ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ರು. ಖಾಸಗಿ ಬಸ್ ಮಧ್ಯೆ ಒಂದೊಂದೆ ಸರ್ಕಾರಿ ಬಸ್ ರಸ್ತೆಗೆ ಬರ್ತಿರೊದ್ರಿಂದ ಆಕ್ರೋಶಗೊಂಡ ಖಾಸಗಿ ಬಸ್ ಮಾಲೀಕರು,
ಇಡೀ ರಾತ್ರಿ ಕ್ಯೂನಲ್ಲಿ ನಿಂತು ಸೊಳ್ಳೆಗಳಿಂದ ಕಚ್ವಿಸಿಕೊಂಡು ಕಾಯ್ತೀವಿ, ಬೆಳಗ್ಗೆ ಸರ್ಕಾರಿ ಬಸ್ ಬಂದ್ರೆ ನಮ್ಮ ಕಥೆ ಎನೂ? ಇದರಿಂದ ಏನೂ ಉಳಿತೀಲ್ಲ ನಷ್ಟವಾಗ್ತಿದೆ, ಅಧಿಕಾರಿ ಹೇಳುದ್ರು ಅಂತ ಜನರ ಸೇವೆಗೆ ಬಂದಿದ್ದೇವೆ, ಒಂದು ಬಸ್ ನೀವು ಓಡಿಸಿ ಇಲ್ಲ ನಮಗೆ ಬಿಡಿ ಎಂದು ಕೆಂಡ ಮಂಡಲವಾದ ದೃಶ್ಯ ಕಂಡು ಬಂತು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g