ಜಿಲ್ಲೆಯಲ್ಲಿ 15 ದಿನಗಳ ಕಾಲ ನಿರಾಶ್ರಿತರ ಸಮೀಕ್ಷೆ: ಬಿ.ಸಿ ಬಸವರಾಜ್
1 min readಚಿಕ್ಕಮಗಳೂರು: ನಗರದಲ್ಲಿ ಇನ್ನೂ 15 ದಿನಗಳ ಕಾಲ ನಿರಾಶ್ರಿತರ ಸಮೀಕ್ಷೆ ಮಾಡಲಾಗುತ್ತಿದ್ದು, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳ ಮುಂಭಾಗ, ರೈಲ್ವೆ ನಿಲ್ದಾಣ ಇನ್ನಿತರ ಸ್ಥಳಗಳಲ್ಲಿ ತಂಗುವ ನಿರಾಶ್ರಿತರನ್ನ ಕರೆದೊಯ್ದು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ನೀಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿಸಿ ಬಿ.ಸಿ ಬಸವರಾಜ್ ಹೇಳಿದರು.
ಕಡೂರು ನವ ಜೀವನ ಚಾರಿಟೇಬಲ್ ಸೇವಾ ಸಂಸ್ಥೆ ಅವರಿಂದ ಡಿಸೆಂಬರ್ 5 ರಿಂದ 19 ರವರೆಗೆ ಎರಡು ದಿನಕ್ಕೊಮ್ಮೆ ನಗರಸಭೆ ವ್ಯಾಪ್ತಿಯಲ್ಲಿ ನಗರ ನಿರಾಶ್ರಿತರ ಮೂರನೇ ವ್ಯಕ್ತಿ ಸಮೀಕ್ಷೆಯನ್ನು ನಡೆಸಲಾಗುತ್ತದೆ.
ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿರುವ ನಿರಾಶ್ರಿತರ ಸಮೀಕ್ಷೆಯನ್ನು ಮಾಡಲಾಗುತ್ತಿದ್ದು, ಕಲ್ಯಾಣ ಮಂಟಪ, ರಸ್ತೆ ಬದಿಗಳಲ್ಲಿ ಇನ್ನಿತರೆ ಸ್ಥಳಗಳಲ್ಲಿ ಮಲಗುತ್ತಿರುವ ನಿರಾಶ್ರಿತರನ್ನ ನಿರಾಶ್ರಿತ ಕೇಂದ್ರಕ್ಕೆ ಕಳುಹಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕುರಿತು ಸರ್ವೆ ಮಾಡಲೆಂದು ಕಡೂರಿನ ನವ ಜೀವನ ಚಾರಿಟೇಬಲ್ ಸಂಸ್ಥೆಯನ್ನು ಟೆಂಡರ್ ಕರೆದು ನೇಮಕ ಮಾಡಲಾಗಿದ್ದು, ಇಂದಿನಿಂದ 15 ದಿನಗಳ ಕಾಲ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ನಗರಸಭಾ ವ್ಯಾಪ್ತಿಯಲ್ಲಿ ಸಮೀಕ್ಷೆ ಮಾಡಿ ನಿರಾಶ್ರಿತರನ್ನ ಗುರುತಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಿದರು.
ಈ ರೀತಿಯ ವ್ಯಕ್ತಿಗಳು ಎಲ್ಲಾದರೂ ಕಂಡು ಬಂದರೆ ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡಿದಲ್ಲಿ ಆ ನಿರಾಶ್ರಿತರಿಗೆ ಆಶ್ರಯ ಕೊಡಿಸುವ ಜವಾಬ್ದಾರಿಯನ್ನ ನಗರಸಭೆ ವಹಿಸಿಕೊಳ್ಳುತ್ತದೆ. ಅವರು ಸಂಪೂರ್ಣ ನಿರಾಶ್ರಿತರಾಗಿದ್ದರೆ ಅವರಿಗಾಗಿ ನಗರಸಭೆ ವತಿಯಿಂದ ಜಿ ಪ್ಲಸ್ ಟು ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಕೊಡುವಂತಹ ಕೆಲಸದ ಜೊತೆಗೆ ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನ ಮಾಡಲು ನಗರಸಭೆ ಬದ್ಧವಾಗಿದೆ ಎಂದ ಅವರು 2024ರ ವೇಳೆಗೆ ಯಾರು ಕೂಡ ನಿರಾಶ್ರಿತರು ಇರಬಾರದು ಎಂಬುವುದು ಈ ಕಾರ್ಯಕ್ರಮದ ಉದ್ದೇಶದವಾಗಿದೆ ಎಂದು ತಿಳಿಸಿದರು.
ದುಡಿಯುವಂತಹ ವ್ಯಕ್ತಿಗಳು ಈ ನಿರಾಶ್ರಿತ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬಹುದು. ನಿರಾಶ್ರಿತ ಕೇಂದ್ರದಲ್ಲಿ ಊಟ ತಿಂಡಿ ಸ್ಥಾನದ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಬೇರೆ ಊರುಗಳಿಂದ ಉದ್ಯೋಗ ಆರಸಿ ಬಂದು ತಂಗಲು ವ್ಯವಸ್ಥೆ ಇಲ್ಲದಂತಹ ನಿರಾಶ್ರಿತರಿಗೆ ಈ ನಿರಾಶ್ರಿತ ಕೇಂದ್ರ ಸಹಕಾರಿಯಾಗಲಿದೆ ಎಂದ ಅವರು ನಿರಾಶ್ರಿತ ಕೇಂದ್ರದ ಸದುಪಯೋಗವನ್ನು ಪಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಅಷ್ಟೇ ಅಲ್ಲದೆ ವಸತಿ ರಹಿತರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಒದಗಿಸಿಕೊಡುವ ಕಾರ್ಯವನ್ನು ಸಹ ಮಾಡಲಾಗುತ್ತದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g