May 5, 2024

MALNAD TV

HEART OF COFFEE CITY

ಕಡೂರಿನಿಂದ ರಾಮಮಂದಿರಕ್ಕೆ ಹೊರಟ ವಿಶೇಷ ರೈಲು

1 min read

ಚಿಕ್ಕಮಗಳೂರು: ರಾಮ ಮಂದಿರ ಉದ್ಘಾಟನೆ ನಂತರ ದೇಶದ ಎಲ್ಲೆಡೆಯಿಂದ ಅಯೋಧ್ಯೆಗೆ ತೆರಳಲು ಜನ ಸಾಗರವೇ ಮುಗಿಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯಿಂದಲೂ 400 ಜನ ಬಿಜೆಪಿ ಕಾರ್ಯಕರ್ತರು ವಿಶೇಷ ರೈಲಿನಲ್ಲಿ ಹೊರಟಿದ್ದಾರೆ.

ರಾಮ ಮಂದಿರ ವೀಕ್ಷಣೆಗೆ ಜಿಲ್ಲೆಯಿಂದ 400 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ವಿಶೇಷ ರೈಲಿನ ಮೂಲಕ ಕಡೂರಿನಿಂದ ಇಂದು ಪ್ರಯಾಣ ಬೆಳೆಸಿದರು. ತುಮಕೂರು ಚಿತ್ರದುರ್ಗ ಚಿಕ್ಕಮಗಳೂರು ಮೂರು ಜಿಲ್ಲೆಯ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಕಡೂರು ರೈಲು ನಿಲ್ದಾಣದಿಂದ ಹೊರಟ ವೇಳೆ ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಕಾರ್ಯಕರ್ತರನ್ನು ಬೀಳ್ಕೊಡುಗೆ ಕೊಟ್ಟರು. ಮೂರು ದಿನಗಳ ಪ್ರಯಾಣದ ನಂತರ ಅಯೋಧ್ಯೆಗೆ ತಲುಪಲಿದ್ದಾರೆ. ಬಾಲರಾಮ ನನ್ನು ನೋಡಲು ಕಾತುರರಾಗಿ ಸಾವಿರಾರು ಬಿಜೆಪಿ ಕಾರ್ಯಕರ್ತರು ತೆರಳಿದ್ದಾರೆ.

ಕರ್ನಾಟಕ ರಾಜ್ಯ ಬಿಜೆಪಿ ಘಟಕದಿಂದ ಉಚಿತ ರೈಲು ಪ್ರಯಾಣದ ವ್ಯವಸ್ಥೆ ಮಾಡಲಾಗಿದ್ದು ತುಮಕೂರಿನಿಂದ ಇಂದು ಮುಂಜಾನೆ 5 ಗಂಟೆಗೆ ಹೊರಟು 7 ಗಂಟೆ ವೇಳೆಗೆ ಕಡೂರು ರೈಲು ನಿಲ್ದಾಣ ತಲುಪಿದೆ. ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಿಂದ ಆಗಮಿಸಿದ್ದ 400 ಜನ ಬಿಜೆಪಿ ಕಾರ್ಯಕರ್ತರು ಕಡೂರಿನಿಂದ ಪ್ರಯಾಣ ಬೆಳೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ತರೀಕೆರೆ ಮಾಜಿ ಶಾಸಕ ಡಿ.ಎಸ್ ಸುರೇಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ನೂರಾರು ಕಾರ್ಯಕರ್ತರನ್ನು ಬೀಳ್ಕೊಟ್ಟರು. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!