April 27, 2024

MALNAD TV

HEART OF COFFEE CITY

ತಾನು ಹಿಡಿದ ಹಾವಿನಿಂದಲೇ ಮೃತಪಟ್ಟ ಸ್ನೇಕ್ ನರೇಶ್

1 min read

ಚಿಕ್ಕಮಗಳೂರು : ಸೆರೆ ಹಿಡಿದಿದ್ದ ಹಾವು ಕಚ್ಚಿ ಉರಗತಜ್ಞ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.

ಸ್ನೇಕ್ ನರೇಶ್ ಎಂದೇ ಚಿಕ್ಕಮಗಳೂರು ಜಿಲ್ಲಾಧ್ಯಂತ ಹೆಸರು ಗಳಿಸಿದ್ದ 51 ವರ್ಷದ ಸ್ನೇಕ್ ನರೇಶ್ ಮೃತ ದುರ್ದೈವಿಯಾಗಿದ್ದಾರೆ. ಮಾನವ ವಾಸ ಜಾಗಗಳಲ್ಲಿ ಕಂಡು ಬರುತ್ತಿದ್ದ ಹಾವುಗಳನ್ನು, ಸ್ಥಳೀಯ ನಿವಾಸಗಳ ಕರೆಯ ಮೇಲೆ ಸ್ಥಳಕ್ಕೆ ಹೋಗಿ ಹಾವುಗಳನ್ನು ಹಿಡಿದು, ಹಾವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಇದುವರೆಗೆ ಸಾವಿರಾರು ಹಾವುಗಳನ್ನು ಹಿಡಿದಿರುವ ಸ್ನೇಕ್ ನರೇಶ್ ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. 2013 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜನರ ಗಮನ ಸೆಳೆದಿದ್ದರು.

ಬೆಳಗ್ಗೆ ನಾಗರಹಾವು ಹಿಡಿದುಕೊಂಡು ಬಂದಿದ್ದ ಸ್ನೇಕ್ ನರೇಶ್, ಮಧ್ಯಾಹ್ನ ಮತ್ತೊಂದು ಹಾವು ಹಿಡಿಯಲು ಕರೆ ಬಂದಿತ್ತು. ಬೈಕಿನ ಸ್ಕೂಟಿಯಲ್ಲಿದ್ದ ಹಾವಿನ ಚೀಲದ ಗಂಟು ಬಿಗಿ ಮಾಡಲು ಡಿಕ್ಕಿ ಓಪನ್ ಮಾಡಿದ ಕೂಡಲೇ ಡಿಕ್ಕಿಯಲ್ಲಿದ್ದ ನಾಗರಹಾವು ಸ್ನೇಕ್ ನರೇಶ್ ರವರಿಗೆ ಅಚಾನಕ್ಕಾಗಿ ಕಚ್ಚಿದೆ. ಹಾವು ಕಡಿತಕ್ಕೆ ಒಳಗಾದ ಸ್ನೇಕ್ ನರೇಶ್ ಆಸ್ಪತ್ರೆಗೆ ಬರುವಷ್ಟರಲ್ಲಿ ಕೊನೆಯುಸಿರು ಚೆಲ್ಲಿದ್ದಾರೆ.

ಬೈಕ್ ಡಿಕ್ಕಿಯಲ್ಲಿ ಇದ್ದದ್ದು ಎರಡೇ ಹಾವುಗಳಾದರೇ, ಸ್ನೇಕ್ ನರೇಶ್ ರವರ ಕಾರಿನಲ್ಲಿ ಬರೋಬರಿ 30ಕ್ಕೂ ಹೆಚ್ಚು ಹಾವುಗಳು ಇದ್ದವು. ಕಾರಿನ ಸೀಟ್, ಡಿಕ್ಕಿಯಲ್ಲಿ 20ಕ್ಕೂ ಹೆಚ್ಚು ಹಾವು ತುಂಬಿದ ಚೀಲಗಳು ಇದ್ದವು. ಹಾವುಗಳನ್ನ ಹಿಡಿದು ಕಾರಿನಲ್ಲಿ ಶೇಖರಿಸಿಕೊಂಡಿದ್ದ ನರೇಶ್, 15 ದಿನಕ್ಕೊಮ್ಮೆ ಚಾರ್ಮಾಡಿಗೆ ಹೋಗಿ ಹಾವುಗಳನ್ನ ಬಿಟ್ಟು ಬರ್ತಿದ್ದರು.

ಹಾವುಗಳನ್ನು ಹಿಡಿಯುವುದನ್ನೇ ಸೇವೆ, ಕಾಯಕ ಮಾಡಿಕೊಂಡಿದ್ದ ಸ್ನೇಕ್ ನರೇಶ್ ತಾನು ಹಿಡಿದ ನಾಗರಹಾವಿನಿಂದಲೇ ಮೃತಪಟ್ಟಿರುವುದು ದುರ್ದೈವದ ಸಂಗತಿಯಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!