ಶಕ್ತಿ ಯೋಜನೆ ಎಫೆಕ್ಟ್.. ಪ್ರವಾಸಿ ಕೇಂದ್ರ ಫುಲ್ ರಶ್..!
1 min read
ಚಿಕ್ಕಮಗಳೂರು : ನವರಾತ್ರಿಗೆ ಶಕ್ತಿ ಯೋಜನೆ ಫುಲ್ ಸಾಥ್ ಕೊಟ್ಟಿದ್ದು, ಪ್ರಯಾಣಿಕರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಹಸ ಪಟ್ಟಿರೋ ಘಟನೆ ಶೃಂಗೇರಿ ತಾಲೂಕಿನ ಬಸ್ ನಿಲ್ದಾಣದಲ್ಲಿ ನಡೆದಿದೆ.
ನವರಾತ್ರಿ ಹಿನ್ನೆಲೆ ಶೃಂಗೇರಿ ಕ್ಷೇತ್ರವು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ರಾಜ್ಯದ ವಿವಿಧಡೆಯಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.
ಶಕ್ತಿ ಯೋಜನೆಯ ಫ್ರೀ ಬಸ್ ಗಾಗಿ ಪ್ರಯಾಣಿಕರು ಮುಗಿ ಬಿದ್ದದ್ದಾರೆ. ಸರ್ಕಾರಿ ಬಸ್ಗಳು ಕೂಡ ಫುಲ್ ರಶ್ ಆಗಿದೆ. ಒಂದೇ ಬಸ್ ಗೆ ಹತ್ತಲು 300ಕ್ಕೂ ಹೆಚ್ಚು ಜನ ಮುಗಿಬಿದ್ದಾರೆ.
ಸೀಟ್ಗಾಗಿ ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನ ಟವೆಲ್ ನಂತೆ ಪೋಷಕರು ತುಂಬಿಸಿ ರಿಸರ್ವೇಶನ್ ಮಾಡಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.
ಶೃಂಗೇರಿಯಲ್ಲಿ ಬಸ್ ಹತ್ತಲು ಮುಗಿ ಬಿದ್ದ ಮಹಿಳಾ ಮಣಿಗಳನ್ನು ನಿಯಂತ್ರಿವಲ್ಲಿ ಸಿಬ್ಬಂದಿಗಳು ಹೈರಾಣದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g