ಸಿ ಪಿ ಐ ಪಕ್ಷದಿಂದ ಸೆ. 12 -13 ರಂದು ಜಿಲ್ಲಾ ಸಮ್ಮೇಳನ
1 min read
ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮ್ಮೇಳನವು ಇದೇ ಸೆಪ್ಟೆಂಬರ್_12 ಮತ್ತು 13 ರಂದು ನಡೆಯಲಿದೆ ಎಂದು ಪಕ್ಷದ ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್ ಎಂ ರೇಣುಕಾರಾಧ್ಯ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ೧೨ ರಂದು ಬೆಳಿಗ್ಗೆ ೧೧ ಗಂಟೆಗೆ ಪಕ್ಷದ ಕಚೇರಿಯಿಂದ ಬೃಹತ್ ಮೆರವಣಿಗೆ ನಡೆಯಲಿದ್ದು ಸಂಜೆ ಆಜಾದ್ ಪಾರ್ಕ್ ನಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಂವಿಧಾನಕ್ಕೆ ಒದಗಿರುವ ಅಪಾಯ ಧರ್ಮಗಳ ಹೆಸರಿನ ಸಂಘರ್ಷ ಭಯೋತ್ಪಾದನೆ ಬೆಲೆ ಏರಿಕೆ ನಿರುದ್ಯೋಗ ಸಮಸ್ಯೆಗಳು ಸೇರಿದಂತೆ ಜಿಲ್ಲೆಯ ಭೂ ರಹಿತರ ನೆರೆ ಹಾಗೂ ಕಾಫಿ ಕೈಗಾರಿಕೆ ಎದುರಿಸುತ್ತಿರುವ ಕಿರುಕುಳ ನೀರಾವರಿ ಅರಣ್ಯ ಕಾನೂನನುಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ದಲಿತರ ಸಮಸ್ಯೆಗಳನ್ನು ಹಸಿರು ಕನ್ವೆನ್ಶನ್ ಹಾಲ್ ನಲ್ಲಿ ರಾಜ್ಯ ಮುಖಂಡರಾದ ಪಿ ವಿ ಲೋಕೇಶ್ , ಸಾತಿ ಸುಂದರೇಶ್ ಸಿದ್ದನಗೌಡ ಪಾಟಿಲ್ ನೇತೃತ್ವದಲ್ಲಿ ಚರ್ಚಿಸಲಾಗುವುದು ಎಂದರು ಪತ್ರಿಕಾಗೋಷ್ಠಿಯಲ್ಲಿ ವಿಜಯಕುಮಾರ್, ರಘು , ಗುಣಶೇಖರ್ ಪಾಲ್ಗೊಂಡಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g