May 2, 2024

MALNAD TV

HEART OF COFFEE CITY

ಅರಣ್ಯ ಅಧಿಕಾರಿಗಳು, ಪೋಲಿಸರು, ಗ್ರಾಮಸ್ಥರಿಂದ ಹುಡುಕಾಟ

1 min read

ಕೊಟ್ಟಿಗೆಹಾರ:ಚಾರ್ಮಾಡಿ ಘಾಟ್ ಅರಣ್ಯದ ನಡುವೆ ಇರುವ ಬಿದಿರುತಳ ಗ್ರಾಮದಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಸೋಮವಾರ ಅರಣ್ಯ ಅಧಿಕಾರಿಗಳು, ಪೋಲಿಸರು, ಗ್ರಾಮಸ್ಥರು ಹುಡುಕಾಟ ನಡೆಸಿದರು.ಬಾಳೂರಿನ ನಾಗೇಶ್ ಆಚಾರ್ (೪೬) ಎಂಬುವವರು ಮನೆ ನಿರ್ಮಾಣ ಕೆಲಸಕ್ಕೆಂದು ಬಿದಿರುತಳ ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಹೋಗಿದ್ದು ಶನಿವಾರದಿಂದ ನಾಗೇಶ್ ಆಚಾರ್ ಅವರು ಕಾಣೆಯಾಗಿದ್ದಾರೆ. ಈ ಬಗ್ಗೆ ನಾಗೇಶ್ ಆಚಾರ್ ಅವರ ಪತ್ನಿ ಸುಮ ಬಾಳೂರು ಠಾಣೆಗೆ ದೂರು ನೀಡಿದ್ದು ಸೋಮವಾರ,

 

 

ಬಾಳೂರು ಪೋಲಿಸರು, ಅರಣ್ಯ ಅಧಿಕಾರಿಗಳು ಹಾಗೂ ೧೫೦ ಕ್ಕೂ ಹೆಚ್ಚು ಗ್ರಾಮಸ್ಥರು ಸೋಮವಾರ ಸಂಜೆಯವರೆಗೂ ಹುಡುಕಾಟ ನಡೆಸಿದ್ದು ನಾಗೇಶ್ ಅವರು ಪತ್ತೆಯಾಗಿಲ್ಲ.ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಾಳೂರು ಠಾಣೆ ಪಿಎಸ್‌ಐ ರೇಣುಕಾ, ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!