ಹೊನ್ನಾಳ ಚೆಕ್ ಪೋಸ್ಟ್ ರಸ್ತೆ ದುರಸ್ತಿ ಮಾಡಿಕೊಡಿ
1 min readಚಿಕ್ಕಮಗಳೂರು : ಕಾಫಿನಾಡಲ್ಲಿ ಮಳೆ ಅಬ್ಬರ ಸೈಲೆಂಟಾಗಿ ಜೋರಾಗ್ತಿದೆ. ಜನಜೀವನ ಅಸ್ತವ್ಯಸ್ತವಾಗ್ತಿದೆ. ಈ ಬಾರಿಯ ಮಳೆ ರಗಳೆ ಮಾಡೋದಿಲ್ಲ ಎಂದು ಮಲೆನಾಡಿಗರು ಆಶಾವಾದದಲ್ಲಿದ್ರು. ಆದ್ರೆ, ಜನರ ನಂಬಿಕೆ ಸುಳ್ಳಾಗ್ತಿದೆ. ಬಿರುಗಾಳಿ ಸಹಿತ ಸುರಿಯುತ್ತಿರೋ ಮಳೆ ಅಬ್ಬರಕ್ಕೆ ಕಣ್ಣೆದುರೇ ರಸ್ತೆಗಳು ಕೊಚ್ಚಿ ಹೋಗ್ತಿವೆ. ಒಂದೇ ರಸ್ತೆ ಮೇಲೆ ಅವಲಂಬಿತರಾಗಿದ್ದ 30ಕ್ಕೂ ಹೆಚ್ಚು ಗ್ರಾಮಗಳ ಜನರೀಗ ಬೇರೆ ದಾರಿಯಿಲ್ಲದೇ ಪರದಾಡ್ತಿದ್ದಾರೆ. ಸ್ಥಳೀಯರಷ್ಟೇ ಅಲ್ದೆ ಭದ್ರಾ ವನ್ಯಧಾಮಕ್ಕೆ ಸಫಾರಿಗೆ ತೆರಳಲು ಪ್ರವಾಸಿಗರು ಅವಕಾಶವಿಲ್ಲದೆ ಪರದಾಡುವಂತಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g