ಹುಟ್ಟಿನಿಂದಲೇ ಜಾತಿಯೇ ಹೊರತು ವಸ್ತ್ರದಿಂದಲ್ಲ ರವೀಂದ್ರ ಬೆಳವಾಡಿ
1 min readಜಿಲ್ಲೆಯ ಕಾಂಗ್ರೆಸ್ನ ಕೆಲವೇ ಕೆಲವು ಹಾಲುಮತದ ಸಮಾಜದವರು ಮಾತ್ರ ಸಿದ್ಧರಾಮಯ್ಯ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಶಾಸಕ ಸಿ.ಟಿ ರವಿ ವಿರುದ್ಧ ರಾಜಕೀಯ ಪಿತೂರಿ ನಡೆಸಲು ಮುಂದಾಗಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಸಂಪೂರ್ಣ ಹಾಲುಮತ(ಕುರುಬ) ಸಮಾಜದ ಬೆಂಬಲವಿಲ್ಲ. ಹುಟ್ಟಿನಿಂದಲೇ ಜಾತಿಯೇ ಹೊರತು ವಸ್ತ್ರದಿಂದಲ್ಲ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಹೇಳಿದರು.
ಶಾಸಕ ಸಿ.ಟಿ ರವಿ ಅವರ ವಸ್ತ್ರದಿಂದಲ್ಲ ಹುಟ್ಟಿನಿಂದಲೇ ಜಾತಿ ಎಂಬ ವಿವಾದಾತ್ಮಕ ಟ್ವೀಟ್ ವಿಚಾರಕ್ಕೆ ಸಂಬ0ಧಿಸಿದ0ತೆ ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಹಾನಗಲ್ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಲುಮತದ ಸಮಾಜ ಗೌರವ ಪೂರ್ವಕವಾಗಿ ನೀಡಿದ ಕಂಬಳಿಯನ್ನು ಪಡೆದಿದ್ದಕ್ಕೆ ಕಂಬಳಿಯನ್ನು ಕುರಿಕಾಯುವವರು ಧರಿಸಬೇಕು ನೀನೇನು ಕುರುಬನಾ, ಕುರಿ ಮೇಯಿಸಿದ್ದೀಯಾ ಎಂದು ಏಕವಚನದಲ್ಲಿ ಪ್ರತಿಕ್ರಯಿಸಿರುವುದು ಸರಿಯಲ್ಲ. ಈ ಹೇಳಿಕೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ ರವಿ ಅವರು, ವಸ್ತ್ರದಿಂದಲ್ಲ ಅಲ್ಲ ಹುಟ್ಟಿನಿಂದ ಜಾತಿ ಎಂದು ಟ್ವೀಟ್ ಮಾಡಿದ್ದಾರೆ ಇದರಲ್ಲಿ ಯಾವುದೇ ವಿವಾದವಿಲ್ಲದಿದ್ದರು ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಮಾಡಿ ಕೆಲವರು ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ಗೆ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಎಲ್ಲಿಯೂ ಈ ಹೇಳಿಕೆಯ ಬಗ್ಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಕೆಲ ಹಾಲುಮತದ ಸಮಾಜದವರು ತಮ್ಮ ಅಸ್ತಿತ್ವವನ್ನು ಈ ಮೂಲಕ ಪ್ರದರ್ಶಿಸುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆ ಕ್ಷೇತ್ರ ಸಂಪೂರ್ಣ ಹಾಲುಮತ ಸಮಾಜದ ಬೆಂಬಲವಿಲ್ಲ ಹಾಗೂ ಈ ಬಗ್ಗೆ ಸ್ವತ: ಹಾಲುಮತ ಸಮಾಜದ ಜಿಲ್ಲಾಧ್ಯಕ್ಷರಿಗೆ ಮಾಹಿತಿ ಇಲ್ಲ ಎಂದರು.
ಕ್ಷೇತ್ರದಲ್ಲಿ ಸಿ.ಟಿ ರವಿ ಶಾಸಕರಾದ ಮೇಲೆ ಗ್ರಾಮ ಪಂಚಾಯಿತಿಯಿ0ದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ, ಎಪಿಎಂಸಿ ಸೇರಿದಂತೆ ಪಕ್ಷದಲ್ಲ ಕುರುಬ ಸಮಾಜದವರಿಗೆ ಉತ್ತಮ ಸ್ಥಾನಮಾನ ನೀಡಿದ್ದಾರೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g