ರಾತ್ರೋರಾತ್ರಿ ಮನೆ ಕೆಡವಿ ರಾಮದೇವರ ಫೋಟೋ: ಬೀದಿಪಾಲಾದ ಕುಟುಂಬ
1 min readಚಿಕ್ಕಮಗಳೂರು: ರಾತ್ರೋರಾತ್ರಿ ವಾಸವಿದ್ದ ಮನೆ ಹೊಡೆದು ರಾಮನ ಫೋಟೋ ಇಟ್ಟ ಘಟನೆ ಬೀರೂರಿನ ಸರಸ್ವತಿಪುರ ವಾರ್ಡ್ ನಲ್ಲಿ ನಡೆದಿದೆ.
ಊರಿನಲ್ಲಿ ದೇವಸ್ಥಾನ ನಿರ್ಮಿಸಲು ವಾಸವಿದ್ದ ಮನೆಯನ್ನೇ ಕೆಡವಿ ಕುಟುಂಬ ಒಂದನ್ನು ಬೀದಿಪಾಲು ಮಾಡಲಾಗಿದ್ದು, ಸದ್ಯ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ಬದುಕಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯ ಬೀರೂರು ಪಟ್ಟಣದ ಸರಸ್ವತಿಪುರ ವಾರ್ಡ್ ನ ಮೂರನೇ ತಿರುವಿನಲ್ಲಿ ದೇವಸ್ಥಾನ ಕಟ್ಡಲು ಮಂಜುನಾಥ್ ಎಂಬುವವರು ಮನೆಯಲ್ಲಿ ಇಲ್ಲದ ವೇಳೆ ಮನೆಯನ್ನು ದ್ವಂಸಗೊಳಿಸಲಾಗಿದೆ. ಕಳೆದ ದತ್ತಜಯಂತಿ ವೇಳೆ ಸಾಲು ಸಾಲು ರಜೆ ಇದ್ದ ವೇಳೆ ಚಿಕ್ಕಮಗಳೂರಿಗೆ ಮಂಜುನಾಥ್ ಕುಟುಂಬ ಆಗಮಿಸಿತ್ತು ಇದನ್ನು ಗಮನಿಸಿದ 13 ಜನರ ತಂಡ ಮನೆಯಲ್ಲಿದ್ದ ವಸ್ತುಗಳನ್ನು ಹೊರಕ್ಕೆ ಬಿಸಾಡಿ ನೆಲಸಮಗೊಳಿಸಿದ್ದಾರೆಂದು ದಂಪತಿ ಆರೋಪಿಸಿದ್ದಾರೆ. ಸ್ಥಳೀಯ ಪುರಸಭೆ ಸದಸ್ಯರ ಪತಿ ಬಿಜೆಪಿ ಮುಖಂಡ ರುದ್ರಪ್ಪನ ಕುಮ್ಮಕ್ಕು ಈ ಮನೆ ದ್ವಂದ್ವ ಪ್ರಕರಣದಲ್ಲಿ ಇದೆ ಎಂದು ದಲಿತ ಸಂಘಟನೆಗಳು ಹೇಳುತ್ತಿದ್ದು, ಪೊಲೀಸರಿಗೆ ಪುರಸಭೆಗೆ ದೂರು ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ನೊಂದ ಮಂಜುನಾಥ್ ಕುಟುಂಬ ಅಳಲು ತೋಡಿಕೊಂಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g