May 19, 2024

MALNAD TV

HEART OF COFFEE CITY

ಅಂತ್ಯಕ್ರಿಯೆಗೂ ಅಡ್ಡಿಯಾದ ಮಳೆ ಶವ ಸಾಗಿಸಲಾಗದೆ ಪರದಾಟ

1 min read

 

 

ಕಳೆದ ಮೂರು ದಿನಗಳಿಂದ ಬಯಲುಸೀಮೆ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಅಬ್ಬರದಿಂದ ಶವ ಸಂಸ್ಕಾರಕ್ಕೂ ಅಡ್ಡಿಯಾಗಿದೆ,

 

ನಿರಂತರ ಮಳೆಯಿಂದ ಸ್ಮಶಾನವೇ ಜಲಾವೃತಗೊಂಡಿದ್ದು ಶವ ಸಂಸ್ಕಾರ ಮಾಡದೇ ಮನೆಯಲ್ಲೇ ಮೃತ ದೇಹ ಉಳಿದದೆ, ಕಡೂರು ತಾಲೂಕಿನ ಎಸ್. ಬೊಮ್ಮನಹಳ್ಳಿಯಲ್ಲಿ ಮಳೆ ತಂದ ಅವಾಂತರ ಈ ಪರಿಸ್ಥಿತಿ ತಂದೊಡ್ಡಿದೆ, ಮೃತ ಪ್ರಮೋದ್ ಶವ ಸ್ಮಶಾನಕ್ಕೆ ಸಾಗಿಸಲಾಗದೆ ಮನೆಯವರು ಪರದಾಡುವಂತಾಗಿದೆ

ಮೂರು ದಿನಗಳಿಂದ ವರುಣ ಈ ಭಾಗದಲ್ಲಿ ಅಬ್ಬರಿಸುತ್ತಿದ್ದು, ಕಳೆದ ರಾತ್ರಿಯೂ ಭಾರೀ ಮಳೆಗೆ ನೀರು ಸ್ಮಶಾನ ಭೂಮಿ ತುಂಬೆಲ್ಲಾ ಆವರಿಸಿದೆ, ಶವ ಸಂಸ್ಕಾರಕ್ಕೆ ಯಾವುದೇ ಬದಲಿ ವ್ಯವಸ್ಥೆ ಇಲ್ಲದೆ ಅಂತ್ಯಕ್ರಿಯೆ ನಡೆಸದೆ ಶವ ಮನೆಯಲ್ಲೇ ಇಟ್ಟಿರುವ ಕುಟುಂಬಸ್ಥರು ಸ್ಥಳೀಯರ ಸಹಾಯ ಬೇಡಿದ್ದಾರೆ, ಮೊನ್ನೆಯಿಂದಲೂ ಚಿಕ್ಕದೇವನೂರು ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಇಂದು ಸ್ಮಶಾನವೂ ಮಳೆಗೆ ಸಿಲುಕಿದೆ

ಇತ್ತ ಮೃತರ ಸಂಬಂಧಿಗಳು ಘಟನೆಗೆ ಸ್ಪಂದಿಸದ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!