May 19, 2024

MALNAD TV

HEART OF COFFEE CITY

ಗಣೇಶ ವಿಸರ್ಜಿಸಿ ಬರುವಾಗ : ಟ್ರಾಕ್ಟರ್ ಗೆ ವಿದ್ಯುತ್ ಪ್ರವಹಿಸಿ ಮೂವರ ಸಾವು

1 min read

 

ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕಿಯರೂ ಸೇರಿದಂತೆ ಮೂವರು ದಾರುಣ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ. ಹೊಸಹಳ್ಳಿ ಯಲ್ಲಿ ಸಂಭವಿಸಿದೆ.

 

ಟ್ರ್ಯಾಕ್ಟರ್ ಅನ್ನು ಸಿಂಗಾರಗೊಳಿಸಿ ನಿರ್ಮಿಸಿದ್ದ ಕಮಾನಿಗೆ ವಿದ್ಯುತ್ ತಂತಿ ಈ ದುರ್ಘಟನೆ ನಡೆದಿದೆ,

ಘಟನೆಯಲ್ಲಿ ರಾಜು (47) ರಚನಾ (35) ಪಾರ್ವತಿ (26) ಮೃತಪಟ್ಟಿದ್ದಾರೆ, ಗಂಭೀರ ಗಾಯಗೊಂಡ ಆರು ಜನರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ ಅವರಲ್ಲಿ ಮೂವರನ್ನು ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ,

ಇದರಲ್ಲಿ ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಸ್ಥಿತಿ ಗಂಭೀರ ಎನ್ನಲಾಗಿದೆ, ಘಟನೆ ವೇಳೆ ಟ್ರಾಕ್ಟರ್ ನ ಇಂಜಿನ್ ಮೇಲೆ ಕೂಳಿತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾನೆ, ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳೆದ ರಾತ್ರಿಯೇ ಎಸ್ಪಿ ಉಮಾ ಪ್ರಶಾಂತ್ ಮೂಡಿಗೆರೆಗೆ ತೆರಳಿ ಘಟನೆಯ ವರದಿ ಪಡೆದಿದ್ದಾರೆ.

ಮೃತರೆಲ್ಲಾ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದ್ದು ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆ ವಿದ್ಯುತ್ ಕಂಬದ ವೈರ್ ಗಳು ಸಡಿಲಗೊಂಡ ಕಾರಣ ಟ್ರಾಕ್ಟರ್ ನ ಕಮಾನಿಗೆ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!