ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ
1 min readಚಿಕ್ಕಮಗಳೂರು: ಮಾಧ್ಯಮ ಸೆನ್ಸೇಷನ್ ಬದಲು ಸೆನ್ಸಿಟಿವಿಟಿ ಬಗ್ಗೆ ಗಮನ ಹರಿಸುವುದು ಬಹುಮುಖ್ಯ ಹಾಗಾಗಿ ಸೆನ್ಸಷನಲ್ ಅನ್ನು ದೂರವಿಟ್ಟು ಸತ್ಯಾಂಶವನ್ನು ಅರಿತು ಕೆಲಸ ಮಾಡುವುದು ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಹೆಚ್ ಅಕ್ಷಯ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ಬೆಳವಣಿಗೆಗಳನ್ನು ಜಗತ್ತಿಗೆ ತಿಳಿಸುವ ಸಲುವಾಗಿ ಪತ್ರಿಕಾ ರಂಗ ಜನರ ಕಿವಿ, ಕಣ್ಣಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಪ್ರಜಾಪ್ರಭುತ್ವದ ಮೂರು ಅಂಗಗಳಾದ ಕಾರ್ಯಾಗ, ನ್ಯಾಯಾಂಗ, ಶಾಸಕಾಂಗ ಎಷ್ಟು ಮುಖ್ಯವೋ ನಾಲ್ಕನೇ ಅಂಗವಾದ ಪತ್ರಿಕಾ ರಂಗವೂ ಅಷ್ಟೇ ಮುಖ್ಯ. ಸಮಾಜದಲ್ಲಿ ಮಾಧ್ಯಮದ ಜವಾಬ್ದಾರಿ ಹೆಚ್ಚು, ಆದರೆ ಇತ್ತೀಚ್ಚೆಗೆ ಸೆನ್ಸೆಷನಲ್ ಹೆಚ್ಚಾಗುತ್ತಿದೆ ಇದಕ್ಕೆ ಸ್ಪರ್ಧೆ ಕಾರಣ ಆ ಹಿನ್ನೆಲೆಯಲ್ಲಿ ಪತ್ರಕರ್ತರ ಮೇಲೆ ಒತ್ತಡ ಹೆಚ್ಚಾಗಿದೆ ಇದರ ನಡುವೆಯೂ ಮಾಧ್ಯಮ ಸೆನ್ಸೇಷನ್ ಬದಲು ಸೆನ್ಸಿಟಿವಿಟಿ ಬಗ್ಗೆ ಗಮನ ಹರಿಸುವುದು ಬಹುಮುಖ್ಯ ಹಾಗಾಗಿ ಸೆನ್ಸಷನಲ್ ಅನ್ನು ದೂರವಿಟ್ಟು ಸತ್ಯಾಂಶವನ್ನು ಅರಿತು ಕೆಲಸ ಮಾಡುವುದು ಉತ್ತಮ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ತೆ ಕಾಪಾಡುವ ದೃಷ್ಟಿಯಿಂದ ನಿಮ್ಮ ಸಹಕಾರ ಬಹಳ ಮುಖ್ಯ. ಆ ಹಿನ್ನೆಲೆಯಲ್ಲಿ ಮಾಧ್ಯಮದ ಸ್ನೇಹಿತರು ಪೊಲೀಸ್ ಇಲಾಖೆಯೊಂದಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದಿರುವುದು ಶ್ಲಾಘನೀಯ. ನಾವೆಲ್ಲರೂ ಸಹ ಸಮಾಜದಲ್ಲಿ ಪುನರ್ ಜಾಗೃತಿ ಬೆಳಸುವ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಿದರೆ ಜಗತ್ತಿನಲ್ಲಿ ಭಾರತ ಸರ್ವಶ್ರೇಷ್ಠವಾಗುವುದಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅದೇ ವೇಳೆ ಮಾತನಾಡಿದ ಪ್ರೆಸ್ ಕ್ಲಬ್ ಅಧ್ಯಕ್ಷ ಆರಗ ರವಿ. ಪತ್ರಕರ್ತ ಸದಾ ಕಾರ್ಯ ಶೀಲರಾಗಿರ ಬೇಕು. ವಯಸ್ಸು ಆಗುತ್ತಿದಂತೆ ಎಲ್ಲಾ ವಿಶ್ರಾಂತಿ ಜೀವನ ಬಯಸುತ್ತಾರೆ. ಪತ್ರಕರ್ತರು ಆಕ್ಟಿವ್ ಆಗಿರ ಬೇಕು ಯಾವಾಗ ಆತ ಕೆಲಸದಿಂದ ನಿವೃತ್ತನಾಗಿ ವಿಶ್ರಾಂತಿ ಹೋಗುತ್ತಾನೆ ಆಗ ಎಲ್ಲ ರೀತಿಯ ಖಾಯಿಲೆಗಳು ಬರುತ್ತೆ. ಮಾನಸಿಕ ವೇಧನೆಗಳು ಶುರುವಾಗುತ್ತೆ. ಪತ್ರಕರ್ತ ಸದಾ ಕ್ರೀಯಾ ಶೀಲನಾಗಿರ ಬೇಕು. ಇಂದು ಸಾಕಷ್ಟು ಟೆಕ್ನಾಲಜಿ ಬೆಳವಣಿಗೆ ಹಾಗಿದೆ. ಪತ್ರಿಕೋದ್ಯಮ ಕೇವಲ ನಾಲ್ಕು ಕೋಣೆಗಳಲ್ಲಿ ಕಲಿಯುವ ಆಗಿಲ್ಲ ಫಿಲ್ಡ್ ನಲ್ಲಿ ಬೇರೆ ಇದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಾಸ್ತವ ಪತ್ರಿಕೋದ್ಯಮ ಬೇಕಾಗಿದೆ ಎಂದು ತಿಳಿಸಿದರು. ವಿಜಯವಾಣಿ ಪತ್ರಿಕ್ಕೆಯಲ್ಲಿ ಸೇವೆಸಲ್ಲಿ ನಿವೃತ್ತರಾದ ಮಂಜುನಾಥ್ ಅವರಿಗೆ ಪ್ರೆಸ್ ಕ್ಲಬ್ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತ್ತು.
ಇನ್ನು ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷರರುಗಳಾದ ಸುರೇಶ್, ಉಮೇಶ್, ಪ್ರೆಸ್ಕ್ಲಬ್ ಉಪಾಧ್ಯಕ್ಷರಾದ ಬಿ.ಎಂ. ರವಿ. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್. ಖಜಾಂಚಿ ಕೆ.ಎಸ್ ಕಿಶೋರ್ ಕುಮಾರ್ ಹಾಗೂ ಪದಾಧಿಕಾರಿಗಳು, ಸದಸ್ಯರು. ಭಾಗವಹಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g