April 29, 2024

MALNAD TV

HEART OF COFFEE CITY

ರಾಜಕಾರಣ ಸರಿಯಲ್ಲ, ಇದು ಕರ್ತವ್ಯ ನಿರ್ವಹಿಸುವ ಸಮಯ : ಸಿದ್ದುಗೆ ಗುದ್ದು ನೀಡಿದ ಸಿ.ಟಿ. ರವಿ

1 min read

ಚಿಕ್ಕಮಗಳೂರು : ಇದು ಕರ್ತವ್ಯ ನಿರ್ವಹಿಸುವ ಸಂದರ್ಭ, ಅಧಿಕಾರ ಚಲಾಯಿಸುವ ಸಂದರ್ಭವಲ್ಲ, ಇದು ರಾಜಕಾರಣ ಮಾಡುವ ಸಂದರ್ಭ ಇದಲ್ಲ ಎಂದು ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕ್ಲಾಸ್ ತೆಗೆದುಕೊಂಡ್ರು

ಸಿದ್ದರಾಮಯ್ಯನವರ ರಾಜಕೀಯ ನಡೆಯ ಬಗ್ಗೆ ಕಿಡಿಕಾರಿದ ಅವರು, ರಾಜ್ಯಪಾಲರು ಸಭೆ ಕರೆದರೆ ಸಂವಿಧಾನಿಕ ಅಧಿಕಾರ ಇಲ್ಲ..! ಅಂತೀರಾ, ಪ್ರಧಾನಿ ಸಭೆ ಕರೆದರೆ ಅವರೇನು ಹೆಡ್ ಮಾಸ್ಟ್ರಾ?! ಅಂತೀರಾ.. ಸಿದ್ದರಾಮಯ್ಯನವರೇ, ಏನಾಗಿದೆ ನಿಮ್ಮ ತಲೆಗೆ, ಇದು ರಾಜಕಾರಣ ಮಾಡುವ ಸಮಯಾನಾ…? ಇದು ಕರ್ತವ್ಯ ನಿರ್ವಹಿಸೋ ಸಂದರ್ಭ, ಅಧಿಕಾರ ಚಲಾಯಿಸೋದಲ್ಲ, ಮೋದಿ ಜಾಗದಲ್ಲಿ ಮತ್ತೊಬ್ಬರ ಕಲ್ಪನೆಯನ್ನೂ ಮಾಡಿಕೊಳ್ಳಲಾಗಲ್ಲ, ಹಾಗೇ ಕಲ್ಪನೆ ಮಾಡಿಕೊಂಡ್ರೆ ಇಂದಿನ ಸ್ಥಿತಿ ಇನ್ನೂ ಗಂಭೀರವಾಗಿರುತ್ತಿತ್ತು. ಊಹೆಗೂ ಮೀರಿ ಕೊರೋನಾ ೧೫ ಪಟ್ಟು ಹೆಚ್ಚಾಗಿದೆ. ನಾನು ವಿರೋಧ ಪಕ್ಷಗಳಲ್ಲೂ ಬಯಸುತ್ತೇನೆ. ಈ ಕೊರೋನಾ ವಿರುದ್ದ ಹೋರಾಟದಲ್ಲಿ ಸಹಕಾರಿಯಾಗಿ. ನೀವಿಗಾ ಕೊರೋನಾ ವಿರುದ್ದ ಹೋರಾಟ ನಡೆಸುತ್ತಿರುವವರ ವಿರುದ್ದ ಹೋರಾಟ ನಡೆಸುವ ಸಣ್ಣತನ ತೋರಿಸಬೇಡಿ ಎಂದು ಹೇಳಿದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!