ರಾಜಕಾರಣಿಗಳು ಗೋವಾಗೆ ಹೋಗುವುದನ್ನ ಮೊದಲು ಕಡಿಮೆ ಮಾಡಬೇಕು : ರಾಜಶೇಖರ್ ಮುಲಾಲಿ
ಚಿಕ್ಕಮಗಳೂರು : ರಾಜಕಾರಣಿಗಳು ಗೋವಾಗೆ ಹೋಗುವುದನ್ನ ಕಡಿಮೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಪ್ರೆಸ್ ಕ್ಲಬ್ ಬಳಿ ಮಾತನಾಡಿದ ಅವರು ಸಿ.ಡಿ ಘಟನೆಯೇ ದೊಡ್ಡ ಷಡ್ಯಂತ್ರವಾಗಿದ್ದು, ಕರ್ನಾಟಕದ ಜನ ಇದನ್ನೆಲ್ಲಾ ನೋಡೋದು ದೊಡ್ಡ ದುರಂತ, ಈ ಸಿ.ಡಿ ಮೇಲ್ನೋಟಕ್ಕೆ ಟ್ಯಾಂಪರಡ್ ಅಂತ ಅನ್ಸತ್ತೆ, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಮೇಲೆ ಸತ್ಯಾಂಶ ಗೊತ್ತಾಗುತ್ತೆ ರಾಜಕಾರಣಿಗಳಿಗೆ ಇದು ಹವ್ಯಾಸವಾಗಿಬಿಟ್ಟಿದೆ. ಕಾಫಿ-ಟಿ, ಊಟ-ತಿಂಡಿ ಜೊತೆ ಅದನ್ನೂ ಇಟ್ಟುಕೊಂಡಿದ್ದಾರೆ. ಅವರ ಹೆಂಡತಿ-ಮಕ್ಕಳು ಹೇಗೆ ಮುಖ ಇಟ್ಕೊಂಡು ಮಾರ್ಕೇಟ್ನಲ್ಲಿ ಓಡಾಡ್ತಾರೆ. ನಮ್ಮಲ್ಲಿ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ. ರಾಜಕಾರಣಿಗಳ ಮುಗ್ಧತೆ ದುರ್ಬಳಕೆಯಾಗಬಾರದು, ಎಚ್ಚರದಿಂದ ಇರಬೇಕು. ರಾಜಕಾರಣಿಗಳು ನಾನು ಸಾಮಾಜಿಕ ಜೀವನದಲ್ಲಿ ಇದ್ದೇನೆಂದು ಯೋಚಿಸಬೇಕು. ಎಂದು ರಾಜಶೇಖರ್ ಮುಲಾಲಿ ಹೇಳಿದ್ದಾರೆ *
ರಾಜಶೇಖರ್ ಮುಲಾಲಿ,
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g