ಬಾಳೆಗಿಡ ನೆಟ್ಟು ಸ್ಥಳಿಯರು ಆಕ್ರೋಶ
1 min read20 ವರ್ಷದಿಂದ ಇದ್ದ ಬಸ್ಸು ರಸ್ತೆ ಸರಿ ಇಲ್ಲ ಎಂದು ನಿಲ್ಲಿಸಿರುವುದರಿಂದ ರಸ್ತೆ ಇಲ್ಲದೆ ತೀವ್ರ ಸಂಕಷ್ಟಕ್ಕೀಡಾಗಿರೋ ಹಳ್ಳಿಗರು ರಸ್ತೆ ಮಧ್ಯೆ ಬಾಳೆಗಿಡ ನೆಟ್ಟು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಹಾಂದಿ ಗ್ರಾಮದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಹಾಂದಿಯಿಂದ ಬಸ್ಕಲ್ವರೆಗೆ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿವೆ. ಈ 20 ಹಳ್ಳಿಯ ಜನರು ಕೂಡ ಕಳೆದ ಎರಡು ವರ್ಷದಿಂದ ಬಸ್ ಇಲ್ಲದೆ ಖಾಸಗಿ ವಾಹನಗಳಿಗೆ ದುಬಾರಿ ಹಣ ನೀಡಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂಬತ್ತು ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜನಸಾಮಾನ್ಯರು ಸಂಚರಿಸಲು ಸಾಧ್ಯವಾಗದೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಹಾಂದಿಯಿಂದ ಬಸ್ಕಲ್ ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ 9 ಕಿ.ಮೀ. ರಸ್ತೆ ಸಂಪೂರ್ಣ ಹದೆಗೆಟ್ಟಿದೆ. ರಸ್ತೆ ತುಂಬಾ ಗುಂಡಿಗಳದ್ದೆ ದರ್ಬಾರ್. ಒಂದು ಚಿಕ್ಕ ಗುಂಡಿಯಾದರೆ ಮತ್ತೊಂದು ದೊಡ್ಡ ಗುಂಡಿ. ರಸ್ತೆಯನ್ನ ದುರಸ್ತಿ ಮಾಡಿಸಿಕೊಡಿ ಅಂತ ಸ್ಥಳೀಯರು ಸರ್ಕಾರಕ್ಕೆ ಪರಿಪರಿಯಾಗಿ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ರಸ್ತೆ ಮಧ್ಯೆ ಬಾಳೆಗಿಡ ನೆಟ್ಟು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಸನ-ಬೇಲೂರು ಸೇರಿದಂತೆ ಚಿಕ್ಕಮಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಅಧಿಕ ವಾಹನಗಳು ಓಡಾಡುತ್ತವೆ. ರಸ್ತೆ ಮಧ್ಯೆ ಗುಂಡಿ ಬಿದ್ದಿರುವುದನ್ನ ಕಂಡು ಹತ್ತಾರು ವರ್ಷಗಳಿಂದಲೂ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಸಂಚಾರವೇ ಸ್ಥಗಿತವಾಗಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಅದೇ ಬಸ್ ನೆಚ್ಚಿಕೊಂಡಿದ್ದರು. ಅಧಿಕಾರಿಗಳು ಸೂಕ್ತ ರಸ್ತೆ ಇಲ್ಲದ ಕಾರಣ ಬಸ್ ಸಂಚಾರವನ್ನ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ವಿದ್ಯಾರ್ಥಿಗಳು ನಡೆದುಕೊಂಡು ಇಲ್ಲವೇ ಆಟೋಗಳಿಗೆ ದುಬಾರಿ ಹಣ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ರಸ್ತೆಯ ಊರುಗಳಿಗೆ ಆಟೋಗಳು ಬರುವುದಿಲ್ಲ. ಬಂದರೂ ದುಬಾರಿ ಹಣ ಕೇಳುತ್ತಾರೆ. ಆಂಬುಲೆನ್ಸ್ ಕೂಡ ಬರೋದಿಲ್ಲ. ವೃದ್ಧರು, ಗರ್ಭೀಣಿಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ದಿನಾ ತಡವಾಗಿ ಹೋಗುತ್ತಿದ್ದಾರೆ. ಆಟೋ ಸಿಕ್ಕರೆ ಆಟೋ ಇಲ್ಲ 5 ಕಿ.ಮೀ. ನಡೆದು ಬೇರೆ ಬಸ್ ಹತ್ತಿ ಹೋಗಬೇಕು. ಹಾಗಾಗಿ, ರಸ್ತೆ ನಿರ್ಮಿಸಿಕೊಡಿ ಎಂದು ಎರಡ್ಮೂರು ವರ್ಷಗಳಿಂದ ಬೇಡಿಕೊಂಡರು ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂಧಿಸಿಲ್ಲ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g