ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೆ ಚಿಕ್ಕಮಗಳೂರು ಯುವಕನೇ ಸಾರಥಿ
1 min readಡಿಸೆಂಬರ್ ಒಳಗೆ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೊಳ್ಳಲಿದ್ದು ಅದರ ಸಾರಥಿ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಯುವಕ ಅವೇಜ್ ಅಹಮದ್ ಆಗಲಿದ್ದಾರೆ. 23ರ ಹರೆಯದ ಅವೇಜ್ ಅಹಮದ್ ಖಾಸಗಿ ಉಪಗ್ರಹ ಉಡಾವಣೆ ಸಂಬಂಧ ಈಗಾಗಲೇ ಪ್ರಧಾನಿ ಮೋದಿ ಜೊತೆ ಎರಡು ಬಾರಿ ಮಾತನಾಡಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಉಡಾವಣೆಯಾಗಬೇಕಿದ್ದ ಉಪಗ್ರಹ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ, ಮುಂಬರೋ ಡಿಸೆಂಬರ್ ಒಳಗೆ ಉಪಗ್ರಹ ಉಡಾವಣೆಗೊಳ್ಳಲಿದ್ದು, ಇಸ್ರೋ ದಿನಾಂಕ ನಿಗದಿ ಮಾಡಬೇಕಿದೆ. ಆರಂಭದಲ್ಲಿ ಈ ಉಪಗ್ರಹ ರಷ್ಯಾದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ, ವಿಷಯ ತಿಳಿದ ಕೇಂದ್ರ ಸರ್ಕಾರ ವಿಜ್ಞಾನಿಗಳ ಜೊತೆ ಮಾತನಾಡಿ ನಿಮಗೆ ಬೇಕಾದ ಎಲ್ಲಾ ಸಪೋರ್ಟ್ ಮಾಡಲಿದ್ದೇವೆ ಎಂದು ಹೇಳಿದ್ದರಿಂದ ಇಂದು ಈ ಉಪಗ್ರಹ ಭಾರತದ ಮಣ್ಣಲ್ಲೇ ಉಡಾವಣೆಗೊಳ್ಳಲಿದೆ. ಭಾರತದಲ್ಲಿ ಹುಟ್ಟಿದ್ದೇವೆ. ಏನೇ ಮಾಡಿದರೂ ಭಾರತಕ್ಕೆ ಮಾಡಬೇಕು ಎಂದು ಅವೇಜ್ ಅಹಮದ್ ನಾಸದಲ್ಲಿ ಸಿಕ್ಕ ಕೆಲಸವನ್ನೂ ಬಿಟ್ಟು ಬಂದಿದ್ದರು. ಬೆಂಗಳೂರಿನಲ್ಲಿ ಪಿಕ್ಸೆಲ್ ಎಂಬ ಕಂಪನಿ ತೆರೆದು ಓದುವಾಗಲೇ ಏರ್ಸ್ಪೆಸ್ನತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಅದರ ಪರಿಣಾಮ ಇಂದು ದೇಶದ ಮೊದಲ ಖಾಸಗಿ ಉಪಗ್ರಹಕ್ಕೆ ಕಾಫಿನಾಡನ ಹುಡುಗ ಸಾರಥಿಯಾಗಲಿದ್ದಾರೆ. ಮುಂದಿನ 2-3 ವರ್ಷದಲ್ಲಿ ಸುಮಾರು 36 ಖಾಸಗಿ ಉಪಗ್ರಹಗಳು ಉಡಾವಣೆಗೊಳ್ಳಲಿವೆ.
ಯಾರು ಅವೇಜ್ ಅಹಮದ್ : ಅವೇಜ್ ಅಹಮದ್. ವಯಸ್ಸಿನ್ನು 23. ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಮದ್ಯಮ ವರ್ಗದ ಕುಟುಂಬ. ತಂದೆ ನದೀಮ್ ಅಹಮದ್. ಮೆಡಿಕಲ್ ಸ್ಟೋರಿ ಇಟ್ಟುಕೊಂಡಿದ್ದಾರೆ. ಮಗ ಏನು ಓದುತ್ತಾನೆ, ಅವನಿಗೆ ಯಾವುದರಲ್ಲಿ ಆಸಕ್ತಿ ಇತ್ತೋ ಅದರಲ್ಲೇ ಓದಿಸಿದ್ದಾರೆ. ಇಡೀ ಜೀವನವನ್ನೇ ಮಗನಿಗಾಗಿ ಮುಡಿಪಾಗಿಟ್ಟು ಒಂದು ಸ್ವಂತ ಮನೆಯನ್ನೂ ನಿರ್ಮಿಸಿಕೊಳ್ಳದೆ ಮಗನಿಗೆ ಜೀವನ ಸವೆಸಿದ್ದಿಂದ ಇಂದು 23 ವರ್ಷದ ಅವೇಜ್ ಅಹಮದ್ ದೇಶವೇ ಮೆಚ್ಚುವ ಸಾಧನೆಗೈದಿದ್ದಾರೆ. ಆಲ್ದೂರು ಹಾಗೂ ಸಂಗಮೇಶ್ವರಪೇಟೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಅವೇಜ್ ಅಹಮದ್ ದೇಶದ ಬಿಡ್ಸ್ ಪಿಲಾನಿ ಯುನಿವರ್ಸಿಟಿಯಲ್ಲಿ ಓದಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವತಃ ಇಂದಿರಾ ಗಾಂಧಿಯೇ ಇನ್ಫ್ಲಯನ್ಸ್ ಮಾಡಿದ್ರು ಸೀಟು ಸಿಗದ ಬಿಡ್ಸ್ ಪಿಲಾನಿ ಯುನಿವರ್ಸಿಟಿಯಲ್ಲಿ ಮೆರಿಟ್ ಸೀಟ್ ಪಡೆದು 477 ರ್ಯಾಂಕ್ ಗಳಿಸಿದ್ದರು. ಮೊದಲ ವರ್ಷದ ಓದಿನಲ್ಲೇ ಅಮೇರಿಕಾಕೆ ಪ್ರಯಾಣ ಬೆಳೆಸಿದ್ದರು.
ಪಿಕ್ಸೆಲ್ ಕಂಬನಿ ಆರಂಭ : ಮೂರನೇ ವರ್ಷದಲ್ಲಿ ಓದುವಾಗಲೇ ಬೆಂಗಳೂರಿನಲ್ಲಿ ಏರೋಸ್ಪೇಸ್ ಎಂಬ ಪಿಕ್ಸೆಲ್ ಕಂಪನಿ ಆರಂಭಿಸಿದ್ದರು. ಅದು ಉಪಗ್ರಹ ತಯಾರಿಕಾ ಕಂಪನಿ. ಅವೇಜ್ ಅಹಮದ್ ತಯಾರಿಸಿದ ಆ ಉಪಗ್ರಹಗಳನ್ನ ಇಸ್ರೋದಿಂದಲೇ ಉಡಾವಣೆ ಮಾಡಬೇಕೆಂಬ ಹಠ, ಆಸೆ ಅವರದ್ದಾಗಿತ್ತು. ರಷ್ಯಾದಿಂದ ಉಡಾವಣೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ, ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಿ ಕೇಂದ್ರ ಸರ್ಕಾವೇ ಮುಂದೆ ನಿಂತು ಇಂದು ಉಪಗ್ರಹ ಉಡಾವಣೆಗೆ ಸಾಥ್ ನೀಡಿದೆ. ಈ ಖಾಸಗಿ ಉಪಗ್ರಹ ಕಳೆದ ವರ್ಷವೇ ಉಡಾವಣೆ ಆಗಬೇಕಿತ್ತು. ಆದರೆ, ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಉಪಗ್ರಹ ಡಿಸೆಂಬರ್ ಒಳಗೆ ಮುಗಿಲಿನತ್ತ ಮುಖ ಮಾಡಲಿದೆ.
ಉಪಗ್ರಹದ ಸಾಮಥ್ರ್ಯ : ಈ ಉಪಗ್ರಹದ ಕುರಿತು 2020ರ ಡಿಸೆಂಬರ್ 14 ರಂದೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಹಾಗೂ ಖಾಸಗಿ ಕಂಪೆನಿಗಳ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಆಗ ಅವೇಜ್ ಅಹಮದ್ ಕೂಡ ಮೋದಿ ಜೊತೆ ಮಾತನಾಡಿದ್ದರು. ಆಗ ಮೋದಿ ಕೇಂದ್ರ ಸರ್ಕಾರದಿಂದ ಎಲ್ಲಾ ಬೆಂಬಲ ನೀಡುವ ಭರವಸೆ ನೀಡಿದ್ದರು. ಬೇರೆ ಎಲ್ಲಾ ಉಪಗ್ರಹಗಳು ಯಾವ ರೀತಿ ಡೇಟಾವನ್ನ ಬಿಡುಗಡೆ ಮಾಡುತ್ತವೆಯೋ ಅವೇಜ್ ಅಹಮದ್ರವರ ಸಂಶೋಧನೆಯ ಉಪಗ್ರಹ ಬೇರೆಲ್ಲಕ್ಕಿಂತ ಶೇಕಡ 50ಕ್ಕಿಂತ ಹೆಚ್ಚು ಡೇಟಾವನ್ನ ಬಿಡುಗಡೆಗೊಳಿಸುತ್ತೆ. ಅವೇಜ್ ತಯಾರಿಸಿರೋ ಉಪಗ್ರಹ ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ.
ಆಲ್ದೂರಿನ ಜನರಲ್ಲಿ ಹರ್ಷ : ಕಣ್ಣ ಮುಂದೆ ಆಡಿ ಬೆಳೆದ ಇಂದು ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರೋದು ಊರಿನ ಜನರಿಗೆ ಖುಷಿ ತಂದಿದೆ. ವಿಷಯ ಕೇಳಿದಾಗ ನಾವು ತುಂಬಾ ಸಂತೋಷಪಟ್ಟೇವು. ನಮ್ಮ ಮಕ್ಕಳ ಇಂತಹಾ ಸಾಧನೆ ಮಾಡಿದ ಎಂದು ಖುಷಿಯಿಂದ ಸಿಹಿ ಹಂಚಿ ಸಂಭ್ರಮಿಸಿದ್ದೇವು ಅಂತಾರೆ ಅವೇಜ್ ತಂದೆ ನದೀಮ್ ಅಹಮದ್ ಸ್ನೇಹಿತ ರವಿ. ಅವೇಜ್ ತಂದೆ ನದೀಮ್ ಕೂಡ ಅದು ನಮ್ಮ ಜೀವಮಾನದ ಸಂತಸದ ಕ್ಷಣ ಎಂದು ಸಂತೋಷವಾಗಿದ್ದಾರೆ. ಎಲ್ಲಾ ಮಕ್ಕಳು ಇದೇ ರೀತಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಪ್ರತಿ ಮಗುವಿನಲ್ಲೂ ಒಂದೊಂದು ಕಲೆ ಇರುತ್ತೆ. ಎಲ್ಲಾ ಮಕ್ಕಳು ದೇಶದ ಪ್ರಗತಿ ಸಾಧನೆ ಮಾಡಬೇಕು ಎಂದು ಬಯಸಿದ್ದಾರೆ. ಅವೇಜ್ ಅವರ ಉಪಗ್ರಹಗಳು ಯಶಸ್ವಿಯಾಗಿ ಭಾರತದ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ ಅನ್ನೋದು ಪ್ರತಿಯೊಬ್ಬ ಕನ್ನಡಿಗನ ಬಯಕೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g