ಜನರ ಆಶೀರ್ವಾದ ಬಿಜೆಪಿ ಮೇಲಿದೆ : ಸಿ.ಟಿ. ರವಿ
1 min readಚಿಕ್ಕಮಗಳೂರು : ಕೆಪಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಇನ್ನೋಂದು ಹೇಳಿಕೆಯನ್ನು ಸಿದ್ದಪಡಿಸಿಟ್ಟುಕೊಂಡಿರಬಹುದು, ಚುನಾವಣೆ ಸೋತ ತಕ್ಷಣ ಚುನಾವಣಾ ಆಯೋಗದ ಮೇಲೆ ದೂರು ಸಲ್ಲಿಸುವುದಕ್ಕೆ, ನ್ಯಾಯಸಮ್ಮತ ಚುನಾವಣೆ ಆಗಲಿಲ್ಲ ಎಂದು, ಇವಿಎಂ ಸರಿ ಇಲ್ಲ ಎಂದು ಹೇಳುವುದಕ್ಕೆ ಹೇಳಿಕೆ ಸಿದ್ದಮಾಡಿಟ್ಟುಕೊಂಡಿರಬಹುದು ಎಂದು ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣಾ ದಿನಾಂಕ ನಿಗದಿಯಾಗಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ, ಪ್ರಜಾಸತತ್ಮಾಕವಾಗಿ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಚುನಾಣಾ ಆಯೋಗದಲ್ಲಿ ಚರ್ಚೆ ಮಾಡಿ, ಕೇಂದ್ರ ಚುನಾವಣಾ ಆಯೋಗಕ್ಕೆ ಶಿಪಾರಸ್ಸು ಮಾಡುತ್ತೇವೆ. ಕೇಂದ್ರಿಯ ಚುನಾವಣಾ ಸಮಿತಿ ನಿರ್ಣಾಯ ಕೈಗೊಳ್ಳುತ್ತದೆ. ರಣ ರಂಗದಲ್ಲಿ ಕುರುಕ್ಷೇತ್ರ ಕಾಲದಿಂದಲ್ಲೂ ನೋಡಿದ್ದೇವೆ. ದುರ್ಯೋದನನು ಬಂದು ಕೃಷ್ಣನನ್ನು ಭೇಟಿಯಾಗುತ್ತಾರೆ. ಆದರೆ ಫಲಿತಾಂಶ ಕೌರವರ ನಾಶ ಪಾಂಡವರ ಜಯ, ಮಹಾಭಾರತದ ಕಾಲದಿಂದಲೂ ನಡೆದಿರುವುದೆ, ಹೊಸದೇನಲ್ಲ, ಎಷ್ಟು ಭಾರಿ ಕೌರವರು ಕೃಷ್ಣನನ್ನು ಭೇಟಿಯಾದರು ಕೃಷ್ಣನ ಆಶೀರ್ವಾದ ಪಾಂಡವರ ಮೇಲೆ, ಹಾಗೆ ಜನರ ಆಶೀರ್ವಾದ ಬಿಜೆಪಿ ಮೇಲಿದೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g